Advertisement

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ

07:07 PM Aug 25, 2022 | Team Udayavani |

ಹೊನ್ನಾಳಿ: ಮಾಜಿ ಶಾಸಕರು ನನ್ನ ಮೇಲೆಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದೇನೆಂದು ಸಾಬೀತು ಪಡಿಸಿದರೆ ನಾನುರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ತಾಲೂಕಿನ ಹೊಸದೇವರ ಹೊನ್ನಾಳಿ,ಹಳೇದೇವರಹೊನ್ನಾಳಿ, ತಕ್ಕನಹಳ್ಳಿ, ಕಮ್ಮಾರಘಟ್ಟೆ,ಕಮ್ಮಾರಘಟ್ಟೆ ತಾಂಡಾ, ಘಂಟ್ಯಾಪುರ ಗ್ರಾಮಗಳಿಗೆಅ ಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆಹಾನಿ ಪರಿಶೀಲನೆ ನಡೆಸಿದ ನಂತರ ಅವರುಮಾತನಾಡಿದರು.ಕಳೆದೊಂದು ತಿಂಗಳಿನಿಂದ ಹೊನ್ನಾಳಿ-ನ್ಯಾಮತಿಅವಳಿ ತಾಲೂಕಿನಾದ್ಯಂತ ಅಧಿ ಕಾರಿಗಳೊಂದಿಗೆ ಮಳೆಹಾನಿ ಗ್ರಾಮಗಳಿಗೆ ಹಗಲು ರಾತ್ರಿ ಎನ್ನದೆ, ಊಟ ಉಪಾಹಾರ ಲೆಕ್ಕಿಸದೆ ಜನರ ಸಂಕಷ್ಟ ಆಲಿಸುವಕೆಲಸ ಮಾಡುತ್ತಿದ್ದೇನೆ.

ಅಧಿಕಾರಿಗಳೊಂದಿಗೆಪಾರದರ್ಶಕವಾಗಿ ಪಕ್ಷಪಾತ ಮಾಡದೆ, ಜಾತಿ,ಧರ್ಮ ನೋಡದೆ ಎಲ್ಲಾ ಸಮುದಾಯದವರಮನೆಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದ್ದೇನೆ. ಮನೆಹಾನಿಯಾದವರು ಯಾವುದೇ ಪಕ್ಷಕ್ಕೆ ಸೇರಿದ್ದರೂಅವರ ಮನೆಗಳಿಗೆ ಭೇಟಿ ನೀಡಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next