Advertisement

ಕೃಷಿ ಮೇಳ ಯಶಸ್ಸಿಗೆ ಸಹಕರಿಸಿ

11:40 AM Jan 27, 2020 | Naveen |

ಹೊನ್ನಾಳಿ: ಲಿಂ.ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮತ್ತು ಲಿಂ.ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ತ ಮಾ.5, 6 ಮತ್ತು 7ರಂದು ಮೂರು ದಿನಗಳ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕೃಷಿ
ಮೇಳ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹಿರೇಕಲ್ಮಠದ ಸ್ಥಿರ ಪಟ್ಟಾಧ್ಯಕ್ಷರು ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಧ್ಯಕ್ಷ ಡಾ.ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

Advertisement

ರಾಜ್ಯಮಟ್ಟದ ಕೃಷಿ ಮೇಳ ಹಮ್ಮಿಕೊಂಡಿರುವ ಪ್ರಯುಕ್ತ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು, ವಿವಿಧ ಜಿಲ್ಲೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯಮಟ್ಟದ ಕೃಷಿ ಮೇಳ ಇದಾಗಿರುವುದರಿಂದ ರಾಜ್ಯ 30 ಜಿಲ್ಲೆಗಳ ಕೃಷಿ ಅಧಿ ಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸಲಹೆ ಸಹಕಾರ ನೀಡಿದರೆ ಕೃಷಿ ಮೇಳ ಯಶಸ್ವಿ ಕಾಣುತ್ತದೆ ಎಂದು ಹೇಳಿದರು.

ಕೃಷಿ ಮೇಳದಿಂದ ನಮ್ಮ ರೈತರ ಆದಾಯ ಹೆಚ್ಚಾಗಿ ರೈತರು ನೆಮ್ಮದಿ ಬದುಕು ಕಟ್ಟಿಕೊಂಡರೆ ಸಾರ್ಥಕವಾಗುತ್ತದೆ. ರೈತ ಸಂತಸದಿಂದಿದ್ದರೆ ಮಾತ್ರ ಸರ್ವರೂ ಸುಖದಿಂದ ಬಾಳಲು ಸಾಧ್ಯ ಎಂದು ನುಡಿದರು. ಕೃಷಿ ಮೇಳದಲ್ಲಿ 200 ಮಳಿಗೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ
ಸದುಪಯೋಗವನ್ನು ರಾಜ್ಯ ವಿವಿಧ ಜಿಲ್ಲೆಗಳ ಪ್ರದರ್ಶನಕಾರರು ಆಗಮಿಸಿ ಸದುಪಯೋಗ ಮಾಡಿಕೊಳ್ಳಬೇಕು. ಒಂದು ಮಳಿಗೆಗೆ ಕೇವಲ ರೂ.3 ಸಾವಿರ ಮೂರು ದಿನಕ್ಕೂ ನಿಗದಿ ಮಾಡಲಾಗಿದೆ. ಕೃಷಿಗೆ ಸಂಬಂಧಪಟ್ಟ ಉಪಕರಣಗಳಿಗೆ ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಲಾಖಾಧಿಕಾರಿಗಳು ಸ್ಟಾಲ್‌ ಗಳ ಸ್ಥಾಪನೆಗೆ ತಮ್ಮ ಜಿಲ್ಲೆಗೆ ಆಸಕ್ತ ರೈತರಿಗೆ ಹಾಗೂ ಇತರರಿಗೆ ತಿಳಿಸಬೇಕು ಎಂದು ಹೇಳಿದರು.

ಕೃಷಿ ಮೇಳದ ಅಂಗವಾಗಿ ವಿವಿಧ ಸ ³ರ್ಧೆ, ಪ್ರಾತ್ಯಕ್ಷಿಕೆ, ಕೃಷಿ ಗೋಷ್ಠಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಕಾರಣೀಕರ್ತರಗಾಬೇಕು ಎಂದು ಹೇಳಿದರು.

ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು, ದಾವಣಗೆರೆ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್‌, ಹೊನ್ನಾಳಿ ಕೃಷಿ ಇಲಾಖೆ ಉಪ ನಿರ್ದೇಶಕಿ ಹಂಸವೇಣಿ, ರಾಣಿಬೆನ್ನೂರು ಕೃಷಿ ಇಲಾಖೆ ಉಪ ನಿರ್ದೇಶಕಿ ಜಿ.ಎಸ್‌. ಸ್ಫೂರ್ತಿ, ತಾಲೂಕು ವೈದ್ಯಾ ಧಿಕಾರಿ ಡಾ.ಕೆಂಚಪ್ಪಬಂತಿ, ಪಪಂ ಮುಖ್ಯಾ ಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಹೊನ್ನಾಳಿ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ. ಸುರೇಶ್‌, ಬಿಇಒ ಜಿ.ಇ. ರಾಜೀವ್‌ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಕೃಷಿ ಮೇಳದ ಬಗ್ಗೆ ಸಲಹೆ ನೀಡಿದರು. ಪಪಂ ಸದಸ್ಯ ಸುರೇಶ್‌ ಹೊಸಕೇರಿ, ಪ್ರಾಂಶುಪಾಲ ಡಾ.ಕೊಟ್ರೇಶ್‌ ಉತ್ತಂಗಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next