Advertisement

Tollywood: ಜೂ.ಎನ್‌ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ

09:01 AM May 07, 2024 | Team Udayavani |

ಹೈದರಾಬಾದ್: ಜೂ.ಎನ್‌ ಟಿಆರ್‌ ಅವರ ಬಹು ನಿರೀಕ್ಷಿತ ʼದೇವರʼ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಆಂಧ್ರದಲ್ಲಿ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ.

Advertisement

ಸೋಮವಾರ(ಮೇ.6 ರಂದು) ʼದೇವರʼ ಚಿತ್ರೀಕರಣದ ಸಂದರ್ಭದಲ್ಲಿ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ ಒಂದು ಕ್ಷಣ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿರುವ ಘಟನೆ ನಡೆದಿರುವುದು ವರದಿಯಾಗಿದೆ.

ಅಲ್ಲೂರಿ ಜಿಲ್ಲೆಯ ಪಾಡೇರುವಿನ ಮೋದಕೊಂಡಮ್ಮ ಬಳಿ ಸಿನಿಮಾದ ಮಹತ್ವದ ದೃಶ್ಯವನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಏಜೆನ್ಸಿ ಪ್ರದೇಶದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಏಕಾಏಕಿ ಜೇನುನೊಣಗಳ ದೊಡ್ಡ ಗುಂಪೊಂದು ʼದೇವರʼ ತಂಡದ ಮೇಲೆ ದಾಳಿ ಮಾಡಿವೆ.

ಲೇಟೆಸ್ಟ್‌ ಮಾಹಿತಿಯ ಪ್ರಕಾರ ಈ ಘಟನೆಯಲ್ಲಿ ತಂಡದ ಯಾವುದೇ ಸದಸ್ಯರಿಗೆ ಪ್ರಾಣಾಪಾಯವಾಗಿಲ್ಲ. ಕಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಲ್ಪ ವಿರಾಮದ ನಂತರ ಶೂಟಿಂಗ್ ಪುನರಾರಂಭವಾಗಿದೆ ಎಂದು ವರದಿ ತಿಳಿಸಿದೆ.

ಘಟನೆಯ ಸಂದರ್ಭದಲ್ಲಿ ನಟ ಜೂ.ಎನ್‌ ಟಿಆರ್‌ ಸ್ಥಳದಲ್ಲಿ ಇರಲಿಲ್ಲ. ಅವರು ಸದ್ಯ ʼವಾರ್‌ -2ʼ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಕೊರಟಾಲ ಶಿವ ನಿರ್ದೇಶನದ ʼದೇವರʼ ಎರಡು ಪಾರ್ಟ್‌ ನಲ್ಲಿ ರಿಲೀಸ್‌ ಆಗಲಿದ್ದು, ಈ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ  ಜಾಹ್ನವಿ ಕಪೂರ್‌, ಸೈಫ್‌ ಆಲಿಖಾನ್‌ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಅಕ್ಟೋಬರ್ 10 ರಂದು ಸಿನಿಮಾ ಬಿಡುಗಡೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next