Advertisement

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

09:08 PM Apr 18, 2024 | Team Udayavani |

ಅಜೆಕಾರು: ಹೆರ್ಮುಂಡೆ ಚಿಂಕರಮಲೆ ಅರಣ್ಯ ವ್ಯಾಪ್ತಿಯ ಉಯ್ನಾಲೆ ಪಾದೆ ಎಂಬಲ್ಲಿ ಕಾಳ್ಗಿಚ್ಚಿನಿಂದಾಗಿ ಸಸ್ಯ ಸಂಪತ್ತು ಹಾನಿಗೀಡಾಗಿದೆ.

Advertisement

ಚಿಂಕರಮಲೆ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಮೂರು – ನಾಲ್ಕು ದಿನಗಳ ಹಿಂದೆ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡ ಸ್ಥಳೀಯ ಸುಮಾರು 50 ಯುವಕರ ತಂಡ ಸ್ಥಳಕ್ಕೆ ತೆರಳಿ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಿದೆ.

ಉಯ್ನಾಲೆ ಪಾದೆಯು ಹೆರ್ಮುಂಡೆ ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ. ದೂರದಲ್ಲಿದ್ದು ಗುಂಡಮ, ಮಾರ್ಲಿ, ಕುದುರು ಪ್ರದೇಶಗಳಲ್ಲಿ ವ್ಯಾಪಿಸಿತ್ತು. ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕೆ ತೆರಳಿ ಸಂಪೂರ್ಣ ನಂದಿಸುವಲ್ಲಿ ಕಾರ್ಯ ನಿರತವಾಗಿದೆ. ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಉಯ್ನಾಲೆ ಪಾದೆ ಪ್ರದೇಶದಲ್ಲಿ ಜೇನು ತೆಗೆಯಲು ಹೋದ ಸ್ಥಳೀಯರು ಹೊಗೆ ಹಾಕಲು ಹೊರಟಾಗ ಕಾಳ್ಗಿಚ್ಚು ಉಂಟಾಗಿರ ಬಹುದು ಎಂದು ಸ್ಥಳೀಯರು ಹೇಳಿದರೆ, ಸಿಡಿಲಿನಿಂದ ಬೆಂಕಿ ಹತ್ತಿರಕೊಂಡಿರಬಹುದು ಎಂದು ಕಾರ್ಕಳ ತಾಲೂಕು ವಲಯ ಅರಣ್ಯಾ ಅಧಿಕಾರಿ ಪ್ರಭಾಕರ್‌ ಕುಲಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next