Advertisement

ಸಚಿವನಾಗಿದ್ದ ವೇಳೆ ಪ್ರಾಮಾಣಿಕ ಕೆಲಸ: ಗೋಪಾಲಯ್ಯ

09:52 AM Apr 30, 2023 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಗಣೇಶ ಬ್ಲಾಕ್‌ನಲ್ಲಿ ಸಚಿವ ಕೆ.ಗೋಪಾಲಯ್ಯ  ಮತಯಾಚಿಸಿದರು.

Advertisement

ತಮ್ಮ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಗೋಪಾಲಯ್ಯ ನವರಿಗೆ ಮತ ಚಲಾಯಿಸುತ್ತೇವೆ ಎಂದು ಜನಸಾಮಾನ್ಯರು ನಗು ಮುಖದಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ. ಕೋವಿಡ್‌ ಸಮಯದಲ್ಲಿ ಕ್ಷೇತ್ರದ ಜನರ ಸಂಕಷ್ಟ ಅರಿತು ಮುಖಂಡರು ಹಾಗೂ ಕಾರ್ಯಕರ್ತ ರೊಂದಿಗೆ ಮನೆ ಮನೆಗೆ ಆಹಾರ ಕಿಟ್‌, ಆರೋಗ್ಯ ಕಿಟ್‌, ಆಕ್ಸಿಜನ್‌ ವ್ಯವಸ್ಥೆ, ಲಸಿಕೆ, ಮಾತ್ರೆಗಳು ಹೀಗೆ ಅನೇಕ ಸೌಲಭ್ಯ ಕಲ್ಪಿಸಿದ್ದೇನೆ ಎಂದರು.

ಇದರ ಜತೆಗೆ ಕ್ಷೇತ್ರ ದಲ್ಲಿ ಆಸ್ಪತ್ರೆಗಳು, ಹೆರಿಗೆ ಆಸ್ಪತ್ರೆ, ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ, ರಾಣಿ ಅಬ್ಬಕ್ಕದೇವಿ
ಕ್ರೀಡಾಂಗಣ, ಬಾಲಗಂಗಾಧರನಾಥ ಸ್ವಾಮೀಜಿ ಪಾರ್ಕ್‌, ಶಿವಕುಮಾರ ಸ್ವಾಮೀಜಿ ಪಾರ್ಕ್‌, ನವ ನಂದಿನಿ ಪಾರ್ಕ್‌
ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸಚಿವನಾಗಿದ್ದ ವೇಳೆ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.

ಈ ವೇಳೆ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಡಾ|ಗಿರೀಶ್‌ ನಾಶಿ, ರೈಲ್ವೆ ನಾರಾಯಣ್‌, ಅನಂತ್‌, ಚಂದ್ರದಾಸ್‌, ವಾರ್ಡ್‌ ಅಧ್ಯಕ್ಷ ನಾರಾಯಣ್‌, ಯಶೋದಮ್ಮ, ವಿಜಿ ಕುಮಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next