Advertisement

ಮಾರುಕಟ್ಟೆಗೆ ಬಂತು “ಪುಷ್ಪ”, “ಆರ್.ಆರ್.ಆರ್‌” ಗಣಪತಿ: ಫೋಟೋ ವೈರಲ್

01:30 PM Aug 31, 2022 | Team Udayavani |

ನವದೆಹಲಿ: ಎಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದೆ. ಗಣೇಶನ ಆರಾಧನೆಯಲ್ಲಿ ಜನ ನಿರತರಾಗಿದ್ದಾರೆ. ಮಾರುಕಟ್ಟೆಯಲ್ಲಿ ಬಣ್ಣ – ಬಣ್ಣದ ಭಿನ್ನ ಗಣೇಶನ ವಿಗ್ರಹಗಳು ಬಂದಿವೆ.

Advertisement

ಪ್ರತಿವರ್ಷ ಮಾರುಕಟ್ಟೆಯಲ್ಲಿ ಭಿನ್ನವಾದ ಗಣೇಶನ ವಿಗ್ರಹಗಳು ಬರುತ್ತವೆ. ಈ ಬಾರಿಯೂ ಅನೇಕ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲಿ ಕೆಲವೊಂದು ಗಣೇಶನ ಮೂರ್ತಿಗಳು ವೈರಲ್‌ ಆಗಿವೆ.

ಅಲ್ಲು ಅರ್ಜುನ್‌ ಅವರ ʼಪುಷ್ಪʼ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಸಖತ್‌ ಹಿಟ್‌ ಆಗಿತ್ತು. ಚಿತ್ರದಲ್ಲಿ ಸ್ಟೈಲಿಸ್ಟ್‌ ಸ್ಟಾರ್‌ ಠಾಣೆ ಮುಂದೆ ಕೂತು ಹೊಡೆಯುವ “ತಗ್ಗೆದೆಲೇ” ಡೈಲಾಗ್‌ ವೈರಲ್‌ ಆಗಿತ್ತು. ಈಗ ಇದೇ ಮಾದರಿಯಲ್ಲಿ ಗಣೇಶನೂ ಬಂದಿದ್ದಾನೆ!

ಹೌದು, ಮಾರುಕಟ್ಟೆಯಲ್ಲಿ ಅಲ್ಲು ಅರ್ಜುನ್‌ ಪುಷ್ಪದಲ್ಲಿ  ಬಿಳಿ ಕುರ್ತಾ, ಪಜಾಮಾವನ್ನು ಹಾಕಿ ಡೈಲಾಗ್‌ ಹೊಡೆಯುತ್ತಾರೆ. ಹಾಗೆಯೇ ಗಣಪತಿ ಮೂರ್ತಿಯೊಂದನ್ನು ಥೇಟ್‌ ಅಲ್ಲು ಅರ್ಜುನ್‌ ಸ್ಟೈಲ್‌ ನಲ್ಲಿ ತಯಾರಿಸಲಾಗಿದೆ. ಡೈಲಾಗ್ ಹೊಡೆಯುವಾಗ ಕೈ ಮೇಲೆ ಮಾಡುವ ಶೈಲಿಯಲ್ಲಿ ಈ ಗಣೇಶ ತಯಾರಾಗಿದ್ದಾನೆ.
ಇದರ ಫೋಟೋ ಹಾಗೂ ವಿಡಿಯೋವನ್ನು ಅಲ್ಲು ಅರ್ಜುನ್‌ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದರೊಂದಿಗೆ ಆರ್.ಆರ್.ಆರ್‌ ನಲ್ಲಿ ರಾಮ್‌ ಚರಣ್‌ ಅವರ ಅಲ್ಲೂರಿ ಸೀತಾರಾಮ ರಾಜ್ ಪಾತ್ರದ ಗಣೇಶ ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದಾನೆ. ಇದರ ಫೋಟೋಗಳು ಕೂಡ ವೈರಲ್‌ ಆಗಿವೆ.

Advertisement

ವೈರಲ್‌ ಆದ ಬೆನ್ನಲ್ಲೇ ಕೆಲವರು ಅಲ್ಲು ಅರ್ಜುನ್‌ ಪುಷ್ಪದಲ್ಲಿ ಸ್ಮಗ್ಲರ್‌ ಆಗಿದ್ದವರು. ಅಂಥವುದಕ್ಕೆ ಈ ರೀತಿ ಗಣೇಶನ ರೂಪ ಕೊಟ್ಟಿರುವುದು ಸರಿಯಲ್ಲ ಎಂದು ಟೀಕೆ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next