Advertisement

ಹೊಸಪೋಡು ಗ್ರಾಮದಲ್ಲಿ ಬಿರುಗಾಳಿಗೆ ಹಾರಿಹೋದ ಮನೆ ಮೇಲ್ಛಾವಣಿ: ಅಪಾರ ನಷ್ಟ

05:59 PM Aug 06, 2020 | keerthan |

ಹನೂರು (ಚಾಮರಾಜನಗರ): ಬಿರುಗಾಳಿಗೆ ಮನೆಯ ಮೇಲ್ಛಾವಣಿ ಹಾರಿಹೋಗಿ ದಿನಬಳಕೆಯ ವಸ್ತುಗಳು ಹಾನಿಗೀಡಾಗಿರುವ ಘಟನೆ ತಾಲೂಕಿನ ಹುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಪೋಡು ಗ್ರಾಮದಲ್ಲಿ ಜರುಗಿದೆ.

Advertisement

ಹೊಸಪೋಡು ಗ್ರಾಮದ ರತ್ನಮ್ಮ ಎಂಬಾಕೆಗೆ ಸೇರಿದ್ದ ಮನೆಯು ಬಿರುಗಾಳಿಗೆ ಹಾನಿಗೊಳಗಾಗಿದ್ದು, ಗುರುವಾರ ಮುಂಜಾನೆ 5 ಗಂಟೆ ಸುಮಾರಿನಲ್ಲಿ ಘಟನೆ ಜರುಗಿದೆ. ಕಳೆದ 3-4 ದಿನಗಳಿಂದ ಈ ಭಾಗದಲ್ಲಿ ಬಿರುಗಾಳಿ ಮತ್ತು ಮಳೆ ಹೆಚ್ಚಾಗಿದ್ದು ಮುಂಜಾನೆ ಬೀಸಿದ ಬಿರುಗಾಳಿಗೆ ಮನೆಯ 8ಕ್ಕೂ ಹೆಚ್ಚು ಶೀಟುಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಮನೆಯ ಮಾಲೀಕರಾದ ರತ್ನಮ್ಮ ಎಂಬಾಕೆಗೆ ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ.

ಘಟನೆಯಿಂದ ಮನೆಯ ದಿನಬಳಕೆಯ ವಸ್ತುಗಳು, ದಿನಸಿ ಪದಾರ್ಥಗಳು ಹಾನಿಗೀಡಾಗಿದ್ದು ಸುಮಾರು 25 ರಿಂದ 30 ಸಾವಿರ ರೂಗಳಷ್ಟು ನಷ್ಟ ಉಂಟಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next