Advertisement

ಅಂತಿಮ ದರ್ಶನದ ವೇಳೆ ಗಾಯಗೊಂಡ ಪೊಲೀಸ್ ಕಾನ್ಸ್ಟೇಬಲ್ ಆರೋಗ್ಯ ವಿಚಾರಿಸಿದ ಗೃಹ ಸಚಿವ

05:29 PM Oct 31, 2021 | Team Udayavani |

ಬೆಂಗಳೂರು : ನಟ ಪುನೀತ್ ರಾಜಕುಮಾರ್ ಅವರ ” ಅಂತಿಮ ದರ್ಶನ” ವೇಳೆ, ಕರ್ತವ್ಯ ನಿರ್ವಹಿಸುವಾಗ, ಅಭಿಮಾನಿಗಳ ದಟ್ಟಣೆಯ ನೂಕು ನುಗ್ಗಲಿನಲ್ಲಿ ಸಿಲುಕಿ ಕಾಲು ಮುರಿತಕ್ಕೆ ಒಳಗಾದ, ಮಡಿವಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶ್ರೀ ಗಣೇಶ್ ನಾಯಕ್, ಅವರ ಆರೋಗ್ಯವನ್ನು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ದೂರವಾಣಿ ಮೂಲಕ, ವಿಚಾರಿಸಿದರು.

Advertisement

ಗಣೇಶ್ ನಾಯಕ್ ರವರಿಗೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ ಸಚಿವರು, ಇಲಾಖೆಯಿಂದ ಚಿಕಿತ್ಸಾ ವೆಚ್ಚವನ್ನು ಭರಿಸುವ ಹಾಗೂ ಉನ್ನತ ಚಿಕಿತ್ಸೆ ಬೇಕಿದ್ದರೆ ಅದನ್ನೂ ಒದಗಿಸುವ ಬಗ್ಗೆ ಭರವಸೆ ನೀಡಿದರು.

ನೋವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಗಣೇಶ್ ನಾಯಕ್ ಅವರ ಬಗ್ಗೆ ಸಚಿವರು ಸಂತೋಷ ವ್ಯಕ್ತಪಡಿಸಿದರು.

ಗಣೇಶ್ ನಾಯಕ್ ಅವರು ಮಲ್ಯ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಪ್ರಸ್ತುತ ವೆಂಕಟೇಶ್ವರ ಆಸ್ಪತ್ರೆ ಹೊಸೂರ್ ರಸ್ತೆ ಬೆಂಗಳೂರು ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಗೋ ಕಳ್ಳತನ ಪ್ರಕರಣ ಭೇದಿಸಿದ ಸಾಗರ ಪೊಲೀಸರು : ಐವರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next