Advertisement

ಹೋಂ ಐಸೊಲೇಶನ್‌ ಉಲ್ಲಂಘನೆ : ಸೋಂಕಿತನ ವಿರುದ್ಧ ಪ್ರಕರಣ

02:00 AM May 22, 2021 | Team Udayavani |

ಕುಂದಾಪುರ: ಕೊರೊನಾ ಪಾಸಿಟಿವ್‌ ಆಗಿ, ಹೋಂ ಐಸೊಲೇಶನ್‌ನಲ್ಲಿದ್ದ ಕಾವ್ರಾಡಿ ಗ್ರಾಮದ ವ್ಯಕ್ತಿಯೊಬ್ಬರು ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ, ಹೊರಗೆ ತಿರುಗಾಟ ನಡೆಸಿರುವುದಕ್ಕೆ ಅವರ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಕಾವ್ರಾಡಿ ಗ್ರಾ.ಪಂ. ಪಿಡಿಒ ಅವರು ನೀಡಿದ ದೂರಿನಂತೆ ಕಾವ್ರಾಡಿಯ ನಿವಾಸಿ ಮಹಮ್ಮದ್‌ ಜಾಫರ್‌ ವಿರುದ್ಧ ಕೇಸು ದಾಖಲಾಗಿದೆ.

ಕುಂದಾಪುರದ ಸಹಾಯಕ ಆಯುಕ್ತ ಕೆ. ರಾಜು ಅವರು ಭೇಟಿ ನೀಡಿ, ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕುಂದಾಪುರ ತಾಲೂಕು ವೈದ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಕಂಡೂÉರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಲತಾ ನಾಯಕ್‌, ಆಶಾ ಕಾರ್ಯಕರ್ತರು, ಪೊಲೀಸ್‌ ಸಿಬಂದಿ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next