Advertisement

ಅಂತೂ ಇಂತೂ ರಜಾ ಮುಗಿದಿದೆ…

06:00 AM May 25, 2018 | |

ಹತ್ತು ದಿನಗಳ ಹಿಂದೆ ಪತ್ರಿಕೆ ನೋಡುತ್ತ ಕುಳಿತಿದ್ದೆ. ಆ ಸ್ಥಳೀಯ ಪತ್ರಿಕೆಯಲ್ಲಿ ಬರೀ ಬೇಸಿಗೆ ಶಿಬಿರದ ಜಾಹೀರಾತುಗಳೇ ತುಂಬಿದ್ದವು. ‘ಬೇಸಿಗೆ ರಜದ ಮಜ ಅನುಭವಿಸಿ’ ಎನ್ನುವುದೇ ಎಲ್ಲಾ ಜಾಹೀರಾತುಗಳ ಉದ್ಘೋ‚ಷಣೆಗಳಾಗಿದ್ದವು. ನಮ್ಮ ಕಾಲದಲ್ಲಿ ಇವುಗಳೆಲ್ಲಾ ಇರಲಿಲ್ಲವಲ್ಲಾ ಎನ್ನಿಸಿತು.

Advertisement

ಬೇಸಿಗೆ ರಜಾಕ್ಕಾಗಿ ಕಾದು ಕುಳಿತಿರುತ್ತಿದ್ದ ನಮಗೆ ರಜಾ ಸಿಕ್ಕೊಡನೆ ಮಜವೋ ಮಜ ! ಬೆಳಿಗ್ಗೆ ಹನ್ನೊಂದು ಗಂಟೆಯ ಒಳಗೆ ಊಟಮುಗಿಸಿ, ಹೊಳೆಗೆ ಬಟ್ಟೆ ಒಗೆಯಲು ಹೋಗುತ್ತಿದ್ದ ಗೆಳತಿಯ ಜೊತೆ ಹೋಗಿ, ಅವಳು ಬಟ್ಟೆ ಒಗೆಯುವವರೆಗೂ ಹರಟುತ್ತಾ ಕೂರುವುದು, ಮಧ್ಯಾಹ್ನ ಮರಕ್ಕೆ ಉಯ್ನಾಲೆ ಕಟ್ಟಿಸಿಕೊಂಡು ಆಡುವುದೂ, ಕಥೆ-ಕಾದಂಬರಿ ಓದುವುದೂ (ನಾನು, ನನ್ನ ಅಕ್ಕ ಆರನೆಯ ತರಗತಿದಲೇ ಕಾದಂಬರಿ ಓದುತ್ತಿದ್ದೆವು), ಅಮ್ಮ ಅಕ್ಕ , ಗೆಳತಿಯರ ಜೊತೆ ಕಲ್ಲಾಟ, ಚೌಕಾಭಾರ, ಅಟುಗುಳಿ ಮನೆ ಆಡುವುದೂ- ಇತ್ಯಾದಿ. ಸಾಯಂಕಾಲ ಆಟ-ಆಟ-ಆಟ. ಕಣ್ಣುಮುಚ್ಚಾಲೆ, ಕುಂಟಾಟ, ಡಬ್ಟಾವನ್‌-ಟು-ತ್ರಿ, ಗೋಲ್ಡರ್ನ್ ಪ್ಲೇ, ಗುಲ್ಟೋರೊ- ಒಂದೇ ಎರಡೇ ನಾವು ಆಡುತ್ತಿದ್ದ ಆಟಗಳು? ಈ ಮಧ್ಯೆ ಟೂರಿಂಗ್‌ ಟಾಕೀಸ್ನಲ್ಲಿ ಒಳ್ಳೆಯ ಸಿನೆಮಾ ಬಂದರೆ ಅದನ್ನೂ ನೋಡುತ್ತಿದ್ದೆವು. ಆಗೆಲ್ಲಾ  ನಮಗೆ ಒಂದೂ ಮುಕ್ಕಾಲು ತಿಂಗಳು ರಜಾ ಸಿಗುತ್ತಿತ್ತು. ರಜದ ಅವಧಿಯಲ್ಲಿ ನಾವೂ ಮೈಸೂರಿನಲ್ಲಿದ್ದ ಸೋದರ‌ತ್ತೆ ಮನೆಗೋ, ಬೆಂಗಳೂರಿನಲ್ಲಿದ್ದ ಅಜ್ಜಿಮನೆಗೋ ಹೋಗುತ್ತಿದ್ದೆವು. ಒಮ್ಮೊಮ್ಮೆ ನಂಜನಗೂಡಿನಲ್ಲಿದ್ದ ದೊಡ್ಡಮ್ಮನ ಮನೆಗೂ ಹೋಗುತ್ತಿದ್ದೆವು. ಬೆಂಗಳೂರಿನಲ್ಲಿ ಚಿಕ್ಕಮ್ಮಂದಿರ ಒಡನಾಟ, ಅವರು ಹೇಳುತ್ತಿದ್ದ ಕಥೆಗಳು, ಮಾವಿನಮರದ ಕೆಳಗೆ ಅವರು ಹಾಕುತ್ತಿದ್ದ  ಕೈತುತ್ತು ಮನಸ್ಸಿಗೆ ಮುದ ತರುತ್ತಿತ್ತು. ಮೈಸೂರಿನ ನಮ್ಮ ಸೋದರತ್ತೆ ನಮ್ಮನ್ನು ತುಂಬ ಸುತ್ತಾಡಿಸುತ್ತಿದ್ದರು.

ಆಗೆಲ್ಲಾ ರೇಡಿಯೋ ನಮಗೆ ಅಪರೂಪದ ವಸ್ತುವಾಗಿತ್ತು. ಟಿ.ವಿ.ಯ ಹೆಸರೇ ಕೇಳಿರಲಿಲ್ಲ. ಆದರೂ ನಮಗೆ ಬೇಸರ ಎನ್ನಿಸುತ್ತಿರಲಿಲ್ಲ. ರಾತ್ರಿಯ ಹೊತ್ತು ಮನೆಯ ಮುಂದೆ ಚಾಪೆ ಹಾಕಿಕೊಂಡು ನಮ್ಮ ಪಕ್ಕದ ಮನೆಯವರ ಜೊತೆ ಹರಟುತ್ತಿದ್ದೆವು. ಮನೆಗಳಿಂದ ಹೊರಗೆ ಬರುತ್ತಿದ್ದ ಖಾರಾಪುರಿ, ಹಪ್ಪಳ-ಸಂಡಿಗೆ, ಹುರಿಗಾಳು, ಸಾಂತಾಣಿ ನಮ್ಮ ಹರಟೆಯ ಮಜಾ ಹೆಚ್ಚಿಸುತ್ತಿದ್ದವು. ನಡುನಡುವೆ ನಾವು ಜಗಳವಾಡುವುದೂ, ದೊಡ್ಡವರು ಜಗಳ ಬಿಡಿಸುವುದೂ ನಡೆಯುತ್ತಿತ್ತು. ಈಗಿನ ಮಕ್ಕಳಿಗೆ ಆ ತರಹದ ಖುಷಿಯಿಲ್ಲವಲ್ಲ ಎಂದು ಬೇಸರವಾಗುತ್ತದೆ.

ವಾರದ ಹಿಂದೆ ನನ್ನ ತಮ್ಮನ ಮಗಳು ರಂಜಿತಾ ಅಮೆರಿಕದಿಂದ ಕರೆಮಾಡಿ, “”ಅತ್ತೆ, ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತಲ್ವಾ? ರಜದಲ್ಲಿ ಮಕ್ಕಳೆಲ್ಲಾ ಒಟ್ಟಿಗೆ ಸೇರಿ¤ದ್ವಿ. ಅದೆಷ್ಟು ಆಟ ಆಡ್ತಿದ್ವಿ ! ಆ ತರಹ ಆಟ-ಪಾಠಗಳೆಲ್ಲ ನಮ್ಮ ಜನರೇಷನ್‌ಗೆ ಕೊನೆಯಾಯೆ¤àನೋ?” ಎಂದಳು. ನಾನು, “”ಹೌದು ಕಣೆ, ನೀವೆಲ್ಲಾ ಚಿಕ್ಕವರಾಗೇ ಇದ್ದಿದ್ರೆ ಚೆನ್ನಾಗಿರುತ್ತಿತ್ತು” ಎಂದೆ. ಅವಳು ನಗುತ್ತಾ, “”ಅದು ಹೇಗೆ ಸಾಧ್ಯ?” ಎಂದಳು.

ರಂಜಿತಾ ಹೇಳಿದ್ದು ನಿಜ. ನಾವಾಗ ಮೈಸೂರಿನ ಗೀತಾ ರಸ್ತೆಯ ದೊಡ್ಡಮನೆಯಲ್ಲಿದ್ದೆವು. ರಜಾ ಬಂದ ಕೂಡಲೇ ರಂಜಿತಾಳ ದೊಡ್ಡಮ್ಮ ಮಕ್ಕಳೊಡನೆ ಮೈಸೂರಿಗೆ ಬರುತ್ತಿದ್ದರು. ನನ್ನ ಅಕ್ಕ, ಅವಳ ಮಗ, ನನ್ನ ತಂಗಿ ಮಕ್ಕಳು ಎಲ್ಲರೂ ಬರುತ್ತಿದ್ದರು. ಆ ವೇಳೆಯಲ್ಲಿ ನನಗೆ, ಅಕ್ಕನಿಗೆ ಮೌಲ್ಯಮಾಪನ ಕೆಲಸ ಇರುತ್ತಿತ್ತು. ನನ್ನ ತಮ್ಮನ ಹೆಂಡತಿ, ಅವಳ ಅಕ್ಕ ಮಕ್ಕಳ ದಂಡು ಕಟ್ಟಿಕೊಂಡು ಊರು ಸುತ್ತುತ್ತಿದ್ದರು. ಚಾಮುಂಡಿಬೆಟ್ಟ, ಜೂ ಮಾರ್ಕೆಟ್‌, ನಿಮಿಷಾಂಬಾ ದೇವಾಲಯ, ಹೊಟೇಲ್‌, ಸಿನೆಮಾ ಮುಂತಾದ ಕಡೆ ಕರೆದೊಯ್ಯುತ್ತಿದ್ದರು. ಹೊರಗೆ ಹೋಗುವ ಕಾರ್ಯಕ್ರಮವಿಲ್ಲದಿದ್ದಾಗ ಮನೆಯಲ್ಲೇ ಆಡುತ್ತಿದ್ದರು. ಕಣ್ಣುಮುಚ್ಚಾಲೆ, ಬಚ್ಚಿಟ್ಟಿದ್ದ ಸಾಮಾನುಗಳನ್ನು ಹುಡುಕುವುದು, ಯಾವುದಾದರೊಂದು ವಸ್ತು ವರ್ಣಿಸಿ ಆ ವಸ್ತು ಏನೆಂದು ಕೇಳುವುದು, ಕಲರ್‌ಕಲರ್‌ ವಾಟ್‌ ಕಲರ್‌- ಇತ್ಯಾದಿ ಆಟಗಳು ಅವರನ್ನು ಸದಾ ಚಟುವಟಿಕೆಯಲ್ಲಿರುವಂತೆ ಮಾಡುತ್ತಿದ್ದವು. ಸಾಯಂಕಾಲ ಚುರುಮುರಿ, ಐಸ್‌ಕ್ರೀಮ್‌, ಬೋಂಡಾ ತಿನ್ನಲು ಬಲ್ಲಾಳ್‌ ಸರ್ಕಲ್‌ಗೆ ದಂಡು ಹೊರಡುತ್ತಿತ್ತು. ಆ ಮಕ್ಕಳ ಖುಷಿ, ಸಂತೋಷನೋಡಲು ನಮಗೂ ಆನಂದವಾಗುತ್ತಿತ್ತು. ಅವರು ಚೈತನ್ಯದ ಚಿಲುಮೆಗಳಂತೆ, ಮಿಂಚಿನ ಬಳ್ಳಿಗಳಂತೆ  ಸಂಖ್ಯೆಯೂ ಕಡಿಮೆಯಾಗಿದೆ. ಒಂದೊಂದು ಕುಟುಂಬಗಳೂ ದ್ವೀಪಗಳಂತಿವೆ. ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗಬೇಕು, ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ, ಅವರು ಬೇಸಿಗೆ ಶಿಬಿರಗಳ ಮೊರೆಹೋಗುತ್ತಿದ್ದಾರೆ.

Advertisement

ಬೇಸಿಗೆ ಶಿಬಿರಗಳೂ ನಾನಾ ರೀತಿ ಇರುತ್ತವೆ. ಕೆಲವರು ಹಣಮಾಡಲೆಂದೇ ಶಿಬಿರಗಳನ್ನು ನಡೆಸುತ್ತಾರೆ. ಬೆರಳೆಣಿಕೆಯಷ್ಟು ಶಿಬಿರಗಳು ಮಕ್ಕಳಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ. ಬೇಸಿಗೆ ಶಿಬಿರಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗುತ್ತದೆ, ಅವರ ಸುಪ್ತ ಪ್ರತಿಭೆಗಳು ಹೊರಹೊಮ್ಮುತ್ತವೆ, ನಾಯಕತ್ವದ ಗುಣ ಬೆಳೆಯುತ್ತದೆ, ಸಹಬಾಳ್ವೆ-ಸಹಭೋಜನದ ಮಹತ್ವ ತಿಳಿಯುತ್ತಾರೆ, ಸ್ವತಂತ್ರ ಮನೋಭಾವ ಬೆಳೆಸಿಕೊಳ್ಳುತ್ತಾರೆ, ಎಲ್ಲವೂ ನಿಜ. ಆದರೆ ಮತ್ತೂಂದು ರೀತಿಯಲ್ಲಿ ಯೋಚಿಸಿದರೆ ಬೇಸಿಗೆ ಶಿಬಿರ ಶಾಲೆಯ ಮುಂದುವರೆದ ಭಾಗ ಎನ್ನಿಸುತ್ತದೆ. ಪಾಠ, ಓದು, ಹೋಂವರ್ಕ್‌ ಕಾಟ ಇಲ್ಲದಿರಬಹುದು, ಆದರೆ, ಬೇಸಿಗೆಶಿಬಿರದ ಕಾರ್ಯಕ್ರಮಗಳು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತವೆ.

ಕೆಲವು ಬೇಸಿಗೆ ಶಿಬಿರಗಳು ಜಾನಪದ ಆಟಗಳನ್ನು ಪರಿಚಯಿಸುವ, ಮಕ್ಕಳಿಗೆ ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುವ, ಗ್ರಾಮೀಣ ಬದುಕನ್ನು ಪರಿಚಯಿಸುವ ಮಕ್ಕಳ ಸಂತೆ, ಎತ್ತಿನಗಾಡಿಯಲ್ಲಿ ಪ್ರಯಾಣ, ಬೆಟ್ಟ-ಗುಡ್ಡಗಳಿರುವ ಕಡೆಗೆ ಪ್ರವಾಸ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸ್ತುತ್ಯರ್ಹ. ಆದರೆ, ಈಗಿನ ಮಕ್ಕಳಿಗೆ ಬಂಧುಗಳನ್ನು ಭೇಟಿಮಾಡುವ, ಅವರೊಡನೆ ಒಡನಾಡುವ, ಅಜ್ಜ ಹೇಳುವ ಕಥೆಕೇಳುತ್ತ ಅಜಿ j ಹಾಕುವ ಕೈತುತ್ತು ತಿನ್ನುವ ಅವಕಾಶಗಳು ತಪ್ಪಿ ಹೋಗಿವೆ. ಎಲ್ಲರನ್ನೂ ಆಂಟಿ-ಅಂಕಲ್‌ ಎಂದು ಕರೆಯುವುದರಿಂದ ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಮ್ಮ-ದೊಡ್ಡಪ್ಪ, ಮಾವ-ಅತ್ತೆ ಇಂತಹ ಸಂಬಂಧಗಳು ಅರ್ಥವಾಗುತ್ತಿಲ್ಲ. ಅವರಿಗೆ ಮನೆಯಲ್ಲಿ ನಡೆಯುವ ಸಮಾರಂಭಗಳು ಬೋರ್‌! ಅಪ್ಪ-ಅಮ್ಮನ ಜೊತೆ ನೆಂಟರಿಷ್ಟರ ಮನೆಗಳಿಗೆ ಹೋಗುವುದಿಲ್ಲ. ಒಟ್ಟಿಗೆ ಸೇರಿ ಹಬ್ಬ-ಹರಿದಿನಗಳನ್ನು ಆಚರಿಸುವುದು ಗೊತ್ತೇ ಇುಲ್ಲ. ಹೀಗಿರುವಾಗ ಇಂದಿನ ಮಕ್ಕಳಿಗೆ ನಮ್ಮ ನಾಡು-ನುಡಿಯ ಪರಿಚಯವಾಗುವುದು ಹೇಗೆ ಸಾಧ್ಯ? ನಮ್ಮ ಸಂಸ್ಕೃತಿ, ಪರಂಪರೆ, ಪ್ರತಿ ಹಬ್ಬಗಳ ಪ್ರಾಮುಖ್ಯ ಅರಿವಾಗುವುದು ಹೇಗೆ? 

ಸಿ. ಎನ್‌. ಮುಕ್ತಾ

Advertisement

Udayavani is now on Telegram. Click here to join our channel and stay updated with the latest news.

Next