Advertisement

Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

08:46 PM Oct 02, 2024 | Shreeram Nayak |

ಹೊಳೆಹೊನ್ನೂರು: ಸಮೀಪದ ಕೂಡ್ಲಿಯ ತುಂಗಾಭದ್ರ ಸಂಗಮದಲ್ಲಿ ಮುಳುಗಿ ಯುವಕ ಹರ್ಷಿತ್ (23) ನೀರುಪಾಲಾಗಿದ್ದಾನೆ.

Advertisement

ಹೊಳಲ್ಕೆರೆಯಿಂದ ಕುಟುಂಬಸ್ಥರೊಂದಿಗೆ ಬುಧವಾರ ಕೂಡ್ಲಿಯ ತುಂಗಾ ಭದ್ರ ಸಂಗಮದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲು ಬಂದಿದ್ದ ಯುವಕ ಪೂಜೆ ನೆರವೇರಿಸಿ ಸ್ನಾನ್ನಕೆಂದು ಸಂಗಮಕ್ಕಿಳಿದಾಗ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಸಂಗಮದ ತುಂಗಾಭದ್ರ ನದಿಯಲ್ಲಿ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದರು.

ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next