Advertisement

Mangaluru: ಚಿಕಿತ್ಸೆಯ ಬಳಿಕ ಯುವಕ ಅನುಮಾನಾಸ್ಪದ ಸಾವು

12:08 AM Sep 25, 2024 | Team Udayavani |

ಮಂಗಳೂರು: ನಗರದ ಕ್ಲಿನಿಕ್‌ ಒಂದರಲ್ಲಿ ಚಿಕಿತ್ಸೆ ಪಡೆದ ಬಳಿಕ ಯುವಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಕದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಉಳ್ಳಾಲ ನಿವಾಸಿ ಮಹಮ್ಮದ್‌ ಮಾಝಿನ್‌ (32) ಅನುಮಾನಾಸ್ಪದವಾಗಿ ಮೃತಪಟ್ಟವರು. ಮಾಝಿನ್‌ ಅವರ ಎದೆಯಲ್ಲಿ ಮಚ್ಚೆ (ಕೆಡು) ಇತ್ತು. ಅದನ್ನು ತೆಗೆಯಲು ಬೆಂದೂರ್‌ವೆಲ್‌ನ ಕಾಸ್ಮೆಟಿಕ್‌ ಸರ್ಜರಿ ಕೇಂದ್ರಕ್ಕೆ ತಾಯಿ ಮತ್ತು ಪತ್ನಿಯ ಜತೆ ಹೋಗಿದ್ದರು. ಕ್ಲಿನಿಕ್‌ನ ವೈದ್ಯರು ಸಣ್ಣ ಶಸ್ತಚಿಕಿತ್ಸೆಗೆ ಸಲಹೆ ನೀಡಿ, ಅನಸ್ತೇಸಿಯಾ ಕೊಡಿಸಿದ್ದರು. ಬಳಿಕ ಮಾಝೀನ್‌ ಆರೋಗ್ಯ ಏರುಪೇರಾಗಿ ಅವರಿಗೆ ಪ್ರಜ್ಞೆ ಮರಳಿ ಬಂದಿರಲಿಲ್ಲ. ಕೂಡಲೇ ಬೇರೆ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಮೃತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next