Advertisement

ದೇಶದ್ರೋಹದ ಅಪರಾಧದ ಬಗ್ಗೆ ಎಚ್ಚರಿಕೆ ಇರಲಿ: ಅರುಣಾ ರಾಯ್‌

11:18 AM Jan 25, 2019 | Team Udayavani |

ಜೈಪುರ : ಸರಕಾರದ ವಿರುದ್ಧ ಕೇವಲ ಅಭಿಪ್ರಾಯ ವ್ಯಕ್ತಪಡಿಸುವುದನ್ನೇ  ಈಚಿನ ದಿನಗಳಲ್ಲಿ ದೇಶದ್ರೋಹದ ಅಪರಾಧ ಎಂದು ಪರಿಗಣಿಸಲಾಗುತ್ತಿರುವ ಬಗ್ಗೆ ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ಅರುಣಾ ರಾಯ್‌ ಎಚ್ಚರಿಕೆ ನೀಡಿದ್ದಾರೆ. 

Advertisement

ಡಿಗ್ಗಿ ಪ್ಯಾಲೇಸ್‌ ನಲ್ಲಿ ನಡೆಯುತ್ತಿರುವ ಜೈಪುರ ಸಾಹಿತ್ಯೋತ್ಸವದ ಎರಡನೇ ದಿನವಾದ ಇಂದು ಶುಕ್ರವಾರ ‘ತಿಳಿಯುವ ಹಕ್ಕು’ ಕುರಿತಾಗಿ ನಡೆದ ಚರ್ಚಾಗೋಷ್ಠಿಯಲ್ಲಿ  ಅವರು ಮಾತನಾಡುತ್ತಿದ್ದರು. 

‘ಸಂವಾದದ ಅವಕಾಶವನ್ನು ನೀವು ಮುಚ್ಚಿದಾಗ ಮತ್ತು ಕೆಲವೊಂದು ಆಲೋಚನೆಗಳೇ ದೇಶದ್ರೋಹವೆಂದು ಹೇಳಿದಾಗ ನೀವು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಇರುವಿರಿ ಎಂದೇ ಅರ್ಥ’ ಎಂಬುದಾಗಿ ಅರುಣಾ ರಾಯ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next