Advertisement

Ranchi: ನಮಸ್ಕಾರ ಮಾಡಿಲ್ಲ ಎಂದು ಯುವಕನಿಗೆ ಏಟು!

08:21 PM Aug 29, 2023 | Team Udayavani |

ರಾಂಚಿ: ಕಾರಿನಿಂದ ಕೆಳಕ್ಕೆ ಇಳಿದಾಗ “ನಮಸ್ಕಾರ’ ಮಾಡಿಲ್ಲ ಎಂದು ಆರೋಪಿಸಿ, ಯುವಕನೊಬ್ಬನಿಗೆ ಕಾಂಗ್ರೆಸ್‌ ನಾಯಕನ ಪುತ್ರನೊಬ್ಬ ಥಳಿಸಿರುವ ಘಟನೆ ಜಾರ್ಖಂಡ್‌ನ‌ ಧನ್‌ಬಾದ್‌ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಕಾಂಗ್ರೆಸ್‌ ನಾಯಕ ರಣವಿಜಯ್‌ ಸಿಂಗ್‌ ಅವರ ಪುತ್ರ ರಣವೀರ್‌ ಸಿಂಗ್‌ ಮತ್ತು ಆತನ ಬಾಡಿಗಾರ್ಡ್‌ಗಳ ವಿರುದ್ಧ ದೂರು ದಾಖಲಾಗಿದೆ. 11ನೇ ತರಗತಿಯಲ್ಲಿ ಓದುತ್ತಿರುವ ಆಕಾಶ್‌ ಚಾಂಡೆಲ್‌ ತರಗತಿ ಮುಗಿಸಿಕೊಂಡು ಧನ್‌ಬಾದ್‌ನ ಕೋಯಾÉ ಪ್ರದೇಶದಲ್ಲಿ ನಿಂತಿದ್ದ.

Advertisement

ಈ ವೇಳೆ 4-5 ಕಾರುಗಳಲ್ಲಿ ರಣವೀರ್‌ ಸಿಂಗ್‌ ಮತ್ತು ಆತನ ಬಾಡಿಗಾರ್ಡ್‌ಗಳು ಬಂದಿದ್ದಾರೆ. ತನ್ನನ್ನು ನೋಡಿದರೂ ನಮಸ್ಕಾರ ಮಾಡಲಿಲ್ಲ ಎಂದು ಹೇಳಿ, ಆಕಾಶ್‌ಗೆ ರಣವೀರ್‌ ಸಿಂಗ್‌ ಅವಾಚ್ಯ ಶಬ್ದಗಳಲ್ಲಿ ಬೈಯ್ದು, ಹಲ್ಲೆ ನಡೆಸಿದ್ದಾನೆ. ಆತನ ಬಾಡಿಗಾರ್ಡ್‌ಗಳು ಯುವಕನನ್ನು ತಮ್ಮ ಕಾರಿನಲ್ಲಿ ಸ್ವಲ್ಪ ದೂರದ ಟೀ ಅಂಗಡಿಗೆ ಕರೆದುಕೊಂಡು ಹೋಗಿ, ಥಳಿಸಿದ್ದಾರೆ. ಅಲ್ಲದೇ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಆಕಾಶ್‌ ಅವರ ತಂದೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next