Advertisement

Kerala: Ambulanceಗೆ ಡಿಕ್ಕಿ ಹೊಡೆದ ಶಿಕ್ಷಣ ಸಚಿವರ ಬೆಂಗಾವಲು ವಾಹನ, ರೋಗಿ ಬಚಾವ್!

05:07 PM Jul 14, 2023 | Team Udayavani |

ತಿರುವನಂತಪುರಂ: ಕೇರಳ ಶಿಕ್ಷಣ ಸಚಿವರ ಬೆಂಗಾವಲು ಪಡೆ ವಾಹನ ಆಂಬುಲೆನ್ಸ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಮಗುಚಿ ಬಿದ್ದಿದ್ದು, ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಇಬ್ಬರು ಪೊಲೀಸರು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿರುವ ಘಟನೆ ನಡೆದಿದೆ.

Advertisement

ಇದನ್ನೂ ಓದಿ:ಎಮರ್ಜಿಂಗ್ ಏಷ್ಯಾಕಪ್: ಯಶ್ ಧುಲ್ ಶತಕ, ಭಾರತಕ್ಕೆ ಭರ್ಜರಿ ಜಯ

ಶಿಕ್ಷಣ ಸಚಿವರ ಬೆಂಗಾವಲು ಪಡೆ ವಾಹನ(wrong side) ವೇಗವಾಗಿ ಬಂದಿದ್ದು, ಈ ಸಂದರ್ಭದಲ್ಲಿ ಆಂಬುಲೆನ್ಸ್‌ ಕೂಡಾ ದಿಢೀರನೆ ಅಡ್ಡಬಂದ ಪರಿಣಾಮ ಡಿಕ್ಕಿ ಹೊಡೆದಿದ್ದು, ನಂತರ ಬೈಕ್‌ ವೊಂದಕ್ಕೆ ಡಿಕ್ಕಿ ಹೊಡೆದು ನಿಂತಿತ್ತು.

ಘಟನೆಯಲ್ಲಿ ಆಂಬುಲೆನ್ಸ್‌ ನಲ್ಲಿದ್ದ ರೋಗಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ನಿರ್ಲಕ್ಷ್ಯದ ಚಾಲನೆ ಆರೋಪದಡಿ ಸಚಿವರ ಬೆಂಗಾವಲು ವಾಹನದ ಚಾಲಕ ಹಾಗೂ ಆಂಬುಲೆನ್ಸ್‌ ಚಾಲಕನ ವಿರುದ್ಧ ದೂರು ದಾಖಲಾಗಿರುವುದಾಗಿ ವರದಿ ತಿಳಿಸಿದೆ.

ಕೇರಳದ ಶಿಕ್ಷಣ ಸಚಿವ ವಿ.ಸಿವನ್‌ ಕುಟ್ಟಿ ಅವರ ಬೆಂಗಾವಲು ವಾಹನ ತಿರುವನಂತಪುರಂ ಸಮೀಪ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. ಸಚಿವರ ಬೆಂಗಾವಲು ವಾಹನ ಬೈಕ್‌ ಗೆ ಡಿಕ್ಕಿ ಹೊಡೆದಾಗ, ಬೈಕ್‌ ಸವಾರ ಬೈಕ್‌ ಕೆಳಗೆ ಬೀಳದಂತೆ ತಡೆದಿರುವುದು ವೈರಲ್‌ ವಿಡಿಯೋದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next