Advertisement

ಇತಿಹಾಸ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆ

07:49 PM Apr 19, 2019 | Sriram |

ಉಡುಪಿ: ಶಿರಸಿ ಸಮೀಪದ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಮೇ 4-5ರಂದು ನಡೆಯಲಿರುವ ಐದನೇ ವರ್ಷದ ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಉಡುಪಿಯ ಸೋದೆ ಮಠದಲ್ಲಿ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಪ್ರಶಸ್ತಿ ಸಮಿತಿ ಸಂಚಾಲಕರಾದ ಲಕ್ಷಿ¾àಶ್‌ ಹೆಗಡೆ ಸೋಂದಾ, ಕಾರ್ಯದರ್ಶಿ ಸುಧೀರ್‌ ಪರಾಂಜಪೆ, ಸದಸ್ಯರಾದ ವಿ.ಕೆ. ನಾಯಕ್‌ ಮಾಸ್ಕೇರಿ, ಶ್ರೀಧರ್‌ ಹೆಗಡೆ ಬೊಪ್ಪನಕೊಡ್ಲು ಉಪಸ್ಥಿತರಿದ್ದರು.

ಪ್ರಸ್ತುತ ಕಾಲಘಟ್ಟದಲ್ಲಿ ಇತಿಹಾಸ ಸಮ್ಮೇಳನ ಅಗತ್ಯವಾಗಿದೆ. ಯುವಜನತೆ ದೇಶದ ಗತಕಾಲದ ಹೆಮ್ಮೆಯ ಸಂಗತಿಗಳನ್ನು ಮರೆಯುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಇತಿಹಾಸಪ್ರಜ್ಞೆ ಅಗತ್ಯ. ಗತಕಾಲದ ಆದರ್ಶಗಳು ವರ್ತಮಾನ ಮತ್ತು ಭವಿಷ್ಯಕ್ಕೆ ಅಗತ್ಯ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next