Advertisement

ಪತ್ನಿ ಗರ್ಭಿಣಿಯಾಗಿದ್ದಕ್ಕೆ ಮನೆ ಬಿಟ್ಟು ಹೋದ!

07:00 AM Nov 06, 2018 | Team Udayavani |

ಮಧುಗಿರಿ: ಹೆಂಡತಿ ಗರ್ಭಿಣಿಯಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪತಿ ಮನೆ ಬಿಟ್ಟು ಪರಾರಿಯಾದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬುಳ್ಳಸಂದ್ರದಲ್ಲಿ ನಡೆದಿದೆ.

Advertisement

ತಾಲೂಕಿನ ದೊಡ್ಡೇರಿ ಹೋಬಳಿಯ ಬುಳ್ಳಸಂದ್ರದ ಸಿದ್ದಲಿಂಗಪ್ಪ ಪರಾರಿಯಾದ ಪತಿರಾಯ. ಈತ 2 ವರ್ಷದ ಹಿಂದೆ
ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಚನ್ನಪಟ್ಟಣದ ಸರಸ್ವತಿ ಎಂಬಾಕೆಯನ್ನು ಮದುವೆಯಾಗಿದ್ದ. ಬೆಂಗಳೂರಲ್ಲಿ ಕೆಲಸ ಮಾಡುವಾಗ ಫೇಸ್‌ಬುಕ್‌ನಲ್ಲಿ ಆಕೆಯನ್ನು ಪರಿಚಯ ಮಾಡಿಕೊಂಡು, ಪ್ರೀತಿಸಿ, ಆಕೆಗೆ ನಿಗದಿಯಾಗಿದ್ದ ಮದುವೆಯನ್ನು ರದ್ದು ಪಡಿಸಿ, ತಾನೇ ವಿವಾಹವಾಗಿದ್ದ. ಕೆಲ ಕಾಲ ಬೆಂಗಳೂರಿನ ಹೆಗ್ಗೆರೆಯಲ್ಲಿ ವಾಸವಿದ್ದ. ಪತ್ನಿ, ಸರಸ್ವತಿ ಗರ್ಭಿಣಿಯಾದಾಗ ಆಕೆಯನ್ನು ಮಧುಗಿರಿಗೆ ಕರೆ ತಂದು ಗರ್ಭಪಾತಕ್ಕೆ ಒತ್ತಾಯಿಸಿದ. ಇದಕ್ಕೆ ಆಕೆ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡಿದಳು.

ಇದರಿಂದ ಬೇಸರ ಗೊಂಡು ಸಿದ್ದಲಿಂಗ ಪರಾರಿಯಾಗಿದ್ದಾನೆ. ಈ ಸಂಬಂಧ ಆಕೆ ಬಡವನಹಳ್ಳಿ ಹಾಗೂ ಬೆಂಗಳೂರಿನ ಅಕ್ಕೂರು ಪೋಲಿಸ್‌ ಠಾಣೆ ಗಳಿಗೆ ದೂರು ನೀಡಿದ್ದಾಳೆ. ಕಳೆದ ತಿಂಗಳಿಂದಲೂ ಬೆಂಗಳೂರಿನಲ್ಲಿನ ಕೆಲಸಕ್ಕೂ ಹಾಜರಾ ಗದ ಪತಿ, ನನಗೆ ಅನ್ಯಾಯ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಬುಳ್ಳಸಂದ್ರದ ಪತಿ ಮನೆಯ ಮುಂದೆ ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next