Advertisement

ಗಿರವಿ ಇರಿಸಿದ ಆಭರಣ ಬಿಡಿಸದ್ದಕ್ಕೆ ಪತ್ನಿ ಆತ್ಮಹತ್ಯೆ

11:02 AM Oct 27, 2017 | |

ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಮುನಿಸ್ವಾಮಪ್ಪ ಲೇಔಟ್‌ನ ಅನಿತಾ (27) ಎಂಬುವವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಿರವಿ ಅಂಗಡಿಯಲ್ಲಿಟ್ಟಿದ್ದ ಓಡವೆ ಬಿಡಿಸಿಕೊಂಡು ಬಾರದ ಕಾರಣಕ್ಕೆ ಬುಧವಾರ ರಾತ್ರಿ ಪತಿ ಶಿವಕುಮಾರ್‌ ಜತೆ ಜಗಳವಾಡಿದ ಅನಿತಾ, ಮಧ್ಯರಾತ್ರಿ ಕೊಠಡಿಯಲ್ಲಿನ ಸೀಲಿಂಗ್‌ ಫ್ಯಾನ್‌ಗೆ ನೇಣುಬಿಗಿದುಕೊಂಡಿದ್ದಾರೆ.

Advertisement

ಬೆಳಗ್ಗೆ 5.30ರ ಸುಮಾರಿಗೆ ಎಂದಿನಂತೆ ಮಾರ್ಕೆಟ್‌ಗೆ ಹೋಗಿ ತರಕಾರಿ ತರಲು ಎದ್ದಿದ್ದ ಪತಿ, ಕೊಠಡಿಗೆ ಹೋಗಿ ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು. ಶಿವಕುಮಾರ್‌ ಹಾಗೂ ಅನಿತಾ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 3 ವರ್ಷದ ಹೆಣ್ಣುಮಗುವಿದೆ.

ಕಳೆದ ಹಲವು ವರ್ಷಗಳಿಂದ ಶಿವಕುಮಾರ್‌ ರಾಮಮೂರ್ತಿನಗರ ಮುಖ್ಯರಸ್ತೆಯಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ. ಅನಿತಾ ಅವರ ಓಡವೆಗಳನ್ನು ಗಿರವಿ ಅಂಗಡಿಯಲ್ಲಿರಿಸಿದ್ದ ಶಿವಕುಮಾರ್‌ ಬಿಡಿಸಿಕೊಂಡು ಬಂದಿರಲಿಲ್ಲ. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next