Advertisement

Hiriydaka ಸುಲಿಗೆ ಪ್ರಕರಣ; ಆರೋಪಿ ಬಂಧನ

12:06 AM Oct 21, 2023 | Team Udayavani |

ಹೆಬ್ರಿ: ಹಿರಿಯಡ್ಕ ಠಾಣಾ ವ್ಯಾಪ್ತಿಯ ಅಂಜಾರು ಗ್ರಾಮದ ಕಾಜರಗುತ್ತು ಜೈಲ್‌ ರಸ್ತೆಯ ಕಲ್ಲಂಬೆಟ್ಟು ಎಂಬಲ್ಲಿ ಬೈಕ್‌ನಲ್ಲಿದ್ದ ವ್ಯಕ್ತಿಯಿಂದ ಹಣ ದೋಚಿ ಪರಾರಿಯಾಗಿದ್ದ ಆರೋಪಿ ಕಾಪು ತಾಲೂಕಿನ ಮಲ್ಲಾರು ಗ್ರಾಮದ ಸೂರಜ್‌ ಕೋಟ್ಯಾನ್‌ನನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ. ಆತನ ಬೈಕ್‌ ಅನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬಡಬೆಟ್ಟು ಗ್ರಾಮದ ಸಂದೀಪ ನಾಯ್ಕ ಅವರು ಅ. 17ರಂದು ತನ್ನ ಬೈಕ್‌ ಅನ್ನು ಕಲ್ಲಂಬೆಟ್ಟು ಸೇತುವೆ ಬಳಿ ನಿಲ್ಲಿಸಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಹಿಂಬದಿಯಿಂದ ಬಂದು ಒಮ್ಮೆಲೆ ಸಂದೀಪ ನಾಯ್ಕ ಅವರನ್ನು ದೂಡಿ ಸುಮಾರು 25 ಸಾವಿರ ರೂ. ಮೌಲ್ಯದ ಬೈಕ್‌ ಅನ್ನು ಅಪಹರಿಸಿದ್ದರು. ಬ್ರಹ್ಮಾವರ ಇನ್‌ಸ್ಪೆಕ್ಟರ್‌ ದಿವಾಕರ ಪಿ.ಎಂ. ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದು ಒಂದೇ ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next