Advertisement

ಹಿರಿಯಡಕ ಬ್ರಹ್ಮಕಲಶೋತ್ಸವ: ವೈಭವದ ಹೊರೆಕಾಣಿಕೆ ಮೆರವಣಿಗೆ

09:30 AM Apr 17, 2018 | Karthik A |

ಹಿರಿಯಡಕ: ಎಂಟು ಶತಮಾನಗಳ ಇತಿಹಾಸವಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಸುಮಾರು 25 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು ಎ. 16ರಿಂದ 25ರ ತನಕ ನಡೆಯುತ್ತಿರುವ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 16ರಂದು ಆತ್ರಾಡಿ, ಪುತ್ತಿಗೆ, ಗುಡ್ಡೆಅಂಗಡಿ ಮೊದಲಾದೆಡೆಗಳ 16 ವಾರ್ಡುಗಳಿಂದ ಏಕಕಾಲಕ್ಕೆ ಆಕರ್ಷಕ ಟ್ಯಾಬ್ಲೋ ಹಾಗೂ ಭವ್ಯ ಶೋಭಾಯಾತ್ರೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವಿವಿಧ ಬಗೆಯ ಟ್ಯಾಬ್ಲೊ, ನವಿಲುಕುಣಿತ, ಹುಲಿವೇಷ ವಿಶೇಷ ಆಕರ್ಷಣೆಯಾಗಿತ್ತು. ನೂರಕ್ಕೂ ಮಿಕ್ಕಿ ವಾಹನಗಳಲ್ಲಿ ಹೊರೆಕಾಣಿಕೆ ನಡೆಯಿತು. ಬಳಿಕ ಸುಮಾರು 10,000 ಜನರು ಫ‌ಲಾಹಾರ ಸ್ವೀಕರಿಸಿದರು.

Advertisement

ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ಕಾರ್ಯಧ್ಯಕ್ಷ ಗೋವರ್ಧನದಾಸ ಹೆಗ್ಡೆ, ಕಾರ್ಯದರ್ಶಿ ಪರೀಕ ಅರಮನೆ ಸೋಮನಾಥ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನಟರಾಜ ಹೆಗ್ಡೆ, ಮೊದಲಾದವರಿದ್ದರು. ರಾಘವೇಂದ್ರ ಜಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next