Advertisement

ಉದ್ಯೋಗಕ್ಕಾಗಿ ಓಟ ಆಂದೋಲನಕ್ಕೆ ಹಿರೇಮಠ ಬೆಂಬಲ

11:42 AM Jan 14, 2018 | Team Udayavani |

ಬೆಂಗಳೂರು: ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ಯುವ ಜನರು ನಡೆಸುತ್ತಿರುವ “ಉದ್ಯೋಗಕ್ಕಾಗಿ ಓಟ’ ಆಂದೋಲನಕ್ಕೆ ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮಹಾಮೈತ್ರಿಯ ಸಂಚಾಲಕ ಎಸ್‌.ಆರ್‌.ಹಿರೇಮಠ ತಿಳಿಸಿದ್ದಾರೆ.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದ್ದು, ಸ್ವಾರ್ಥ ಮತ್ತು ಧರ್ಮ ರಾಜಕಾರಣದಲ್ಲಿ ಮುಳುಗಿರುವ ಪಕ್ಷಗಳ ವಿರುದ್ಧ, ಚುನಾವಣೆಯ ಹಿನ್ನೆಲೆಯಲ್ಲಿ ಯುವಕರು ಆಂದೋಲನ ನಡೆಸುತ್ತಿರುವುದು ಸರಿಯಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಸೃಷ್ಟಿಯಾಗಿರುವುದು 4 ಲಕ್ಷ ಉದ್ಯೋಗಗಳು ಮಾತ್ರ. ಜತೆಗೆ ನೋಟು ಅಪಮೌಲಿಕರಣ ಮತ್ತು ಜಿಎಸ್‌ಟಿ ಜಾರಿಯಿಂದ 4 ಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದು ಇದಕ್ಕೆ ಯಾರು ಹೋಣೆ ಎಂದರು.

ಗ್ರಾಮೀಣ ಭಾಗದ ಯುವಕರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿಗಳನ್ನಾಗಿಸಲು ಸರ್ಕಾರಗಳು ನೂತನ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next