Advertisement

ಹೊಸ ನಾಯಕನ ನೇಮಕ ಮಾಡಿ

01:36 AM Jul 12, 2019 | Team Udayavani |

ನವದೆಹಲಿ: ಪಕ್ಷವು ಆದಷ್ಟು ಬೇಗ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು. ಅಲ್ಲದೆ, ಕಾಂಗ್ರೆಸ್‌ಗೆ ಒಬ್ಬ ಶಕ್ತಿಶಾಲಿ ನಾಯಕನ ಅಗತ್ಯವಿದೆ ಎಂದು ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅಭಿಪ್ರಾಯಪಟ್ಟಿದ್ದಾರೆ.

Advertisement

ಭೋಪಾಲ್ನಲ್ಲಿ ಮಾತ ನಾಡಿದ ಸಿಂಧಿಯಾ, ‘ರಾಹುಲ್ ಅವರು ರಾಜೀನಾಮೆ ನೀಡುತ್ತಾರೆಂದು ನಾವ್ಯಾರೂ ಊಹಿಸಿರಲಿಲ್ಲ. ಪಕ್ಷಕ್ಕೆ ಈಗ ಅತ್ಯಂತ ಗಂಭೀರ ಸಮಯ. ಈಗಾಗಲೇ ಸಾಕಷ್ಟು ಸಮಯ ಕಳೆದಿದೆ. ಪಕ್ಷ ಆದಷ್ಟು ಬೇಗ ಹೊಸ ನಾಯಕನ ಆಯ್ಕೆ ಮಾಡಬೇಕು’ ಎಂದಿದ್ದಾರೆ.

ರಚಿತ್‌ ಸೇಠ್ ರಾಜೀನಾಮೆ: ಈ ನಡುವೆ, ಕಾಂಗ್ರೆಸ್‌ನ ರಾಷ್ಟ್ರೀಯ ಮಾಧ್ಯಮ ಸಂಚಾಲಕ ರಚಿತ್‌ ಸೇಠ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವತಃ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತಾವು ಹುದ್ದೆಯಲ್ಲಿ ಮುಂದು ವರೆಯುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಫ‌ಲಿತಾಂಶ ಬಂದು 45 ದಿನಗಳು ಕಳೆದಿವೆ. ಮಾಧ್ಯಮಗಳ ಊಹೆಗೆ ಹೊರತಾಗಿ ಇನ್ನೂ ಕಾಂಗ್ರೆಸ್‌ ಅಧ್ಯಕ್ಷರನ್ನು ನೇಮಿಸಲಾಗಿಲ್ಲ. ಕರ್ನಾಟಕ, ಗೋವಾದ ಬೆಳವಣಿಗೆಗಳು ಅರಾಜಕತೆಯು ತಲುಪಿರುವ ಹಂತವನ್ನು ತೋರುತ್ತಿವೆ. ಪಕ್ಷದ ಒಳಗೇ ಎಲ್ಲವೂ ಸರಿಯಿಲ್ಲದಾಗ ಬಿಜೆಪಿಯನ್ನು ದೂಷಿಸಿ ಪ್ರಯೋಜನವಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next