Advertisement

ಹಿಂದೂ ಏಕತಾ ಮೆರವಣಿಗೆ ಇಂದು

11:37 AM May 27, 2018 | Team Udayavani |

ಬೆಂಗಳೂರು: ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಆಠವಲೆಯವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ (ಮೇ 27ರಂದು) ನಗರದಲ್ಲಿ ಹಿಂದೂ ಏಕತಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

Advertisement

ಭಾನುವಾರ ಬೆಳಗ್ಗೆ 10.30ಕ್ಕೆ ವಿಜಯನಗರದ ಆದಿಚುಂಚನಗಿರಿ ಮಠದಿಂದ ಭವ್ಯ ಮೆರವಣಿಗೆ ಹೊರಡಲಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರವನ್ನು ಪ್ರಸಾರ ಮಾಡುವ ಚಿತ್ರರಥ, ಪ್ರಾಚೀನ ಕಲೆ, ಲಾಠಿ-ದಂಡ ಸರಪಳಿಯ ಪ್ರಾತ್ಯಕ್ಷಿಕೆಗಳು ಮೆರವಣಿಗೆಯ ರಂಗು ಹೆಚ್ಚಿಸಲಿವೆ. ರಣರಾಗಿಣಿ ಮಹಿಳೆಯ  ಶಾಖೆಯಿಂದ ûಾತ್ರತೇಜವನ್ನು ಜಾಗೃತಗೊಳಿಸುವ ಪ್ರಾತ್ಯಕ್ಷಿತೆ, ಹಿಂದೂ ಸಂಸ್ಕೃತಿಯ ಶ್ರೇಷ್ಠತ್ವವನ್ನು ತೋರಿಸುವಂತಹ ಉಡುಗೆ-ತೊಡುಗೆ, ಬಾಲಸಾಧಕರ ಆಕರ್ಷಕ ಕಕ್ಷೆಯೂ ಇರುತ್ತದೆ.

ಮೆರವಣಿಗೆಯ ನಂತರ ಸಮಾರೂಪ ಸಭೆಯಲ್ಲಿ ಮುಖ್ಯ ವಕ್ತಾರರಾಗಿ ಆದಿಚುಂಚನಗಿರಿ ಸಂಸ್ಥಾನದ ಸೌಮ್ಯನಾಥ ಸ್ವಾಮೀಜಿ, ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಭಾಗವಹಿಸಲಿ¨ªಾರೆ ಎಂದು ಬೆಂಗಳೂರು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ.ಜಯಂತ ಬಾಳಾಜಿ ಆಠವಲೆಯವರು ಸನಾತನ ಧರ್ಮದ ಪ್ರಸಾರ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿ¨ªಾರೆ. ಪರಾತ್ಪರ ಗುರು ಡಾ.ಜಯಂತ ಆಠವಲೆಯವರ 76 ನೇ ಜನ್ಮದಿನೋತ್ಸವದ ನಿಮಿತ್ತ ಬೆಂಗಳೂರಿನಲ್ಲಿ ಭವ್ಯ ಹಿಂದೂ ಏಕತಾ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಹಲವಾರು ಹಿಂದುತ್ವವಾದಿ ಮತ್ತು ಆಧ್ಯಾತ್ಮಿಕ ಸಂಘಟನೆಗಳು ಸಹಭಾಗಿಯಾಗಲಿವೆ ಎಂಬ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next