Advertisement

Hindalga Central Jail ಬೆಂಗಳೂರು ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ

11:20 PM Oct 09, 2023 | Team Udayavani |

ಬೆಳಗಾವಿ: ಹಿಂಡಲಗಾ ಹಾಗೂ ಬೆಂಗಳೂರು ಜೈಲನ್ನು ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ಬೆದರಿಕೆ ಕರೆ ಮಾಡಿದ್ದಾನೆ.

Advertisement

ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ ಶೇಷ ಅವರಿಗೆ ಮೂರು ಮೊಬೈಲ್‌ ನಂಬರ್‌ಗಳಿಂದ ಕರೆ ಬಂದಿದ್ದು, ಹಿಂಡಲಗಾ ಹಾಗೂ ಬೆಂಗಳೂರು ಕಾರಾಗೃಹದ ಮೇಲೆ ಬಾಂಬ್‌ ಹಾಕಲಾಗು ವುದು. ಜತೆಗೆ ಟಿ.ಪಿ.ಶೇಷ ಅವರ ಸರಕಾರಿ ವಸತಿ ಗೃಹದ ಮೇಲೂ ಬಾಂಬ್‌ ದಾಳಿ ನಡೆಸಲಾಗುವುದು. ಹಿಂಡಲಗಾ ಜೈಲಿನಲ್ಲೇ ಗಲಭೆ ಸೃಷ್ಟಿಸುತ್ತೇನೆ ಎಂದು ತಿಳಿಸಿದ್ದಾನೆ.

“ನಾನು ಹಿಂಡಲಗಾ ಜೈಲಿನ ಹೆಡ್‌ ವಾರ್ಡರ್‌ ಜಗದೀಶ್‌ ಗಸ್ತಿ ಅವರ ಸಂಬಂಧಿ ಕನಾಗಿದ್ದು, ಜತೆಗೆ ಇನ್ನೊಬ್ಬ ವಾರ್ಡರ್‌ ಎಸ್‌.ಎಂ.ಗೋಟೆ ಅವರಿಗೂ ಪರಿಚಿತನಾಗಿದ್ದೇನೆ. ನಾನು ಹಿಂಡಲಗಾ ಜೈಲಿನಲ್ಲಿದ್ದಾಗ ಭೂಗತ ಪಾತಕಿ ಬನ್ನಂಜೆ ರಾಜಾಗೆ ಈ ಇಬ್ಬರು ವಾರ್ಡರ್‌ಗಳ ಸಹಕಾರದಿಂದ ಸಹಾಯ ಮಾಡಿದ್ದೇನೆ’ ಎಂದು ಆತ ಹೇಳಿದ್ದಾನೆ. ಈ ಬಗ್ಗೆ ಡಿಐಜಿಪಿ ಟಿ.ಪಿ.ಶೇಷ ಬೆಳಗಾವಿ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next