Advertisement

ಗೋವಿಗೆ ‘ರಾಷ್ಟ್ರಮಾತೆ’ಸ್ಥಾನ

08:30 AM Dec 15, 2018 | Team Udayavani |

ಹೊಸದಿಲ್ಲಿ: ಹಿಮಾಚಲ ಪ್ರದೇಶದ ವಿಧಾನಸಭೆಯು ಶುಕ್ರವಾರ ಗೋವನ್ನು ‘ರಾಷ್ಟ್ರ ಮಾತೆ’ ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿದೆ. ಕಾಂಗ್ರೆಸ್‌ ಶಾಸಕ ಅನಿರುದ್ಧ್ ಸಿಂಗ್‌ ಅವರು ಮಂಡಿಸಿದ ಈ ನಿರ್ಣಯಕ್ಕೆ ಆಡಳಿತಾರೂಢ ಬಿಜೆಪಿಯ ಎಲ್ಲ ಶಾಸಕರೂ ಬೆಂಬಲ ಸೂಚಿಸಿದ್ದಾರೆ. ಸದ್ಯದಲ್ಲೇ ಈ ಬೇಡಿಕೆಯನ್ನು ಕೇಂದ್ರ ಸರಕಾರದ ಮುಂದಿಡಲು ಹಿಮಾಚಲ ಸರಕಾರ ನಿರ್ಧರಿಸಿದೆ. ಗೋವುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಕೂಡಲೇ ಅವುಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಅವುಗಳು ಮಾನವರಿಗೆ ನೀಡುವ ಕೊಡುಗೆಯನ್ನು ಸ್ಮರಿಸಿಕೊಳ್ಳಲು ಇಂತಹುದೊಂದು ನಿರ್ಣಯದ ಅಗತ್ಯವಿತ್ತು ಎಂದು ಸಿಂಗ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next