Advertisement

Hiliyana: ಮಗನ ಸಾವಿನ ಸುದ್ದಿ ತಿಳಿದು ತಾಯಿ ಕೆರೆಗೆ ಬಿದ್ದು ಸಾವು

01:02 AM Jan 25, 2024 | Team Udayavani |

ಕೋಟ/ಸಿದ್ದಾಪುರ: ರಸ್ತೆ ಅಪಘಾತದಲ್ಲಿ ಮಗ ಮೃತನಾದ ಸುದ್ದಿ ತಿಳಿದ ಸ್ವಲ್ಪ ಸಮಯದಲ್ಲೇ ತಾಯಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಜ. 22ರಂದು ಆವರ್ಸೆ ಸಮೀಪ ಹಿಲಿಯಾಣದಲ್ಲಿ ಸಂಭವಿಸಿದೆ.

Advertisement

ಸ್ಥಳೀಯ ನಿವಾಸಿ, ಶೇಖರ್‌ ಶೆಟ್ಟಿಯವರ ಪತ್ನಿ ವಾರಿಜಾ (76) ಮೃತ ಮಹಿಳೆ. ಅವರ ಪುತ್ರ ಅರುಣ (52) ಶಿರೂರು ಮೂಕೈ ಸಮೀಪ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಜ. 22ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ನನ್ನನ್ನು ಮಗನ ಹತ್ತಿರ ಕರೆದುಕೊಂಡು ಹೋಗಿ ಎಂದು ಹೇಳಿದ್ದ ತಾಯಿ ಬಳಿಕ ಶೀಘ್ರವಾಗಿ ಗದ್ದೆಯಲ್ಲಿ ಕಟ್ಟಿದ್ದ ದನವನ್ನು ತರಲು ಗದ್ದೆಗೆ ಹೋದವರು ವಾಪಸ್‌ ಬರಲಿಲ್ಲ. ಆ ಬಳಿಕ ನೋಡಿದಾಗ ಅವರು ತೋಟದ ಬದಿಯಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದರು. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ.

ಪ್ರಭಾಕರ ಹಿಲಿಯಾಣ ಅವರು ಪೊಲೀಸರಿಗೆ ದೂರು ನೀಡಿದ್ದು ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next