Advertisement

ಹಿಜಾಬ್ ತೀರ್ಪು ಹಿನ್ನೆಲೆ: ವಿಜಯಪುರ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ

09:19 AM Mar 15, 2022 | keerthan |

ವಿಜಯಪುರ : ಹಿಜಾಬ್  ಕುರಿತಾಗಿ ಮಂಗಳವಾರ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸುತ್ತಿರವ ಹಿನ್ನಲೆ ವಿಜಯಪುರ ‌ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಜಿಲ್ಲೆಯ 225 ಪಿಯು ಕಾಲೇಜು ಹಾಗೂ 80 ಡಿಗ್ರಿ ಕಾಲೇಜುಗಳ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮಾ.19 ರ ವರೆಗೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿದ್ದಾಗಿ ಜಿಲ್ಲಾಧಿಕಾರಿ ಸುನಿಲಕುಮಾರ ತಿಳಿಸಿದ್ದಾರೆ.

ಮತ್ತೊಂದೆಡೆ ಎಸ್ಪಿ ಆನಂದ ಕುಮಾರ್ ಅವತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಭಾರತ ಕೇಂದ್ರಿತ ಆರ್ಥಿಕ ಸಿದ್ಧ ಮಾದರಿಗೆ ಆಗ್ರಹ; ಎಬಿಪಿಎಸ್‌ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ

ಎಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ 5 ಡಿವೈಎಸ್ಪಿ, 14 ಸಿಪಿಐ, 42 ಪಿಎಸ್ಐ, 700 ಎಚ್.ಸಿ.- ಕಾನ್ಸಸ್ಟೇಬಲ್ಸ್ , 11 ಡಿಎಆರ್ ತುಕಡಿ ಹಾಗೂ 3 ಐ.ಅರ್.ಬಿ. ತುಕಡಿ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ ಹಾಗೂ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಲ ನಿಯೋಜನೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next