Advertisement

ಕುಂಕುಮ, ಬಳೆ, ವಿಭೂತಿ ಬಗ್ಗೆ ಮಾತನಾಡಿದರೆ ಎಚ್ಚರ: ಮುತಾಲಿಕ್‌

11:21 PM Feb 19, 2022 | Team Udayavani |

ಬಾಗಲಕೋಟೆ: ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿ ರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಪರಂಪರೆ ಇದೆ. ಈ ಬಗ್ಗೆ ಮಾತಾಡಿದರೆ ಸಿಡಿದೇಳಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮವಸ್ತ್ರ ಅಂದರೆ ಬರೀ ಬಟ್ಟೆ. ಅದರ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ ಬಳೆ ಬಗ್ಗೆ ಮಾತಾಡಿದರೆ ಸಹಿಸುವುದಿಲ್ಲ. ಹಿಜಾಬ್‌ ಹಿಂದೆ ಇಸ್ಲಾಮೀ ಕರಣ ಇದೆ. ಬರಿ ಹಿಜಾಬ್‌ ಅಷ್ಟೇ ಅಲ್ಲ. ಈಗ ಬುರ್ಖಾ ಹಾಕಿ ಕೊಂಡು ಬರುತ್ತಾರೆ. ಮುಂದೆ ನಮಾಜಿಗೆ ಅವಕಾಶ ಕೇಳುತ್ತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಂ ಇತಿಹಾಸದಲ್ಲೇ ಇದೆ ಎಂದರು.

ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಹಿಂದಿರುವ ಇಸ್ಲಾಮಿಕ್‌ ಶಕ್ತಿಗೆ ಬೆಲೆ ಕೊಡದೆ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ನಿಮಗೆ ಜಾಬ್‌ ಬೇಕಾದರೆ ಹಿಜಾಬ್‌ ಕೇಳಬೇಡಿ. ಜಾಬ್‌ಗ ವಿದ್ಯೆ ಬೇಕಿದೆಯೇ ಹೊರತು ಹಿಜಾಬ್‌ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next