Advertisement

ಮಳೆಗಾಲ ಸಮೀಪಿಸಿದರೂ ಮುಗಿಯದ ಹೆದ್ದಾರಿ ದುರಸ್ತಿ

10:58 AM Jun 17, 2019 | Suhan S |

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಅಡ್ಡಹೊಳೆಯಿಂದ ಮಾರನಹಳ್ಳಿಯವರೆಗೆ ಸಂಭವಿಸಿದ ಭೂಕುಸಿತದಿಂದ ಸೃಷ್ಟಿಯಾದ ಹಲವು ಅಪಾಯಕಾರಿ ಸ್ಥಳಗಳಲ್ಲಿ ಶಾಶ್ವತ ಕಾಮಗಾರಿ ಮಾಡದಿರುವುದು ಆತಂಕಕಾರಿ ಸಂಗತಿಯಾಗಿದೆ.

Advertisement

ಭೂಕುಸಿತ: ಕಳೆದ ವರ್ಷ ಸುರಿದ ಅತಿವೃಷ್ಟಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ದೋಣಿಗಾಲ್ನಿಂದ ಅಡ್ಡಹೊಳೆಯವರೆಗೆ ಸುಮಾರು 25ಕ್ಕೂ ಹೆಚ್ಚು ಸ್ಥಳಗಳಿಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಆಗಾಗ ಬಂದ್‌ ಆಗಿತ್ತು. ತಾಲೂಕಿನ ಮಾರನಹಳ್ಳಿ ಸಮೀಪ ಗುಡ್ಡ ಕುಸಿದ‌ು ಟ್ಯಾಂಕರ್‌ವೊಂದು ಪ್ರಪಾತಕ್ಕೆ ಉರುಳಿ ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್‌ ನೀರಿನಲ್ಲಿ ಮೃತಪಟ್ಟಿದ್ದರು. ಚಾಲಕನ ಮೃತದೇಹವನ್ನು ಸತತ ಕಾರ್ಯಾಚರಣೆ ನಡೆಸಿ ತೆಗೆಯಲಾಗಿತ್ತು.

ನಿರಂತರ ಅಪಘಾತ: ನಿರಂತರವಾಗಿ ಭೂಕುಸಿತ ಸಂಭವಿಸುತ್ತಲೇ ಇದ್ದ ಕಾರಣದಿಂದ ಕಳೆದ ವರ್ಷ ಆ.13ರಿಂದ ನವೆಂಬರ್‌ ಮಧ್ಯ ಭಾಗದವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಪರಿಣಾಮವಾಗಿ ಬೆಂಗಳೂರು- ಮಂಗಳೂರು ನಡುವಿನ ವಾಹನ ಸಂಚಾರ ಮತ್ತು ಸರಕು ಸಾಗಣೆಯ ಮೇಲೆ ಬಲವಾದ ಹೊಡೆತ ಬಿದ್ದಿತ್ತು.

ಕಾಮಗಾರಿ ವಿಳಂಬ: ಅಡ್ಡಹೊಳೆಯಿಂದ ಮಾರನ ಹಳ್ಳಿಯವರೆಗೆ ಸುಮಾರು 12 ಕಡೆಗಳಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದ್ದರೆ, 13 ಕಡೆಗಳಲ್ಲಿ ಹೆದ್ದಾರಿಯ ಬದಿಯ ತಡೆಗೋಡೆ ಕುಸಿದು ಆಳವಾದ ಕಣಿವೆಗೆ ಉರುಳಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವು ಮಾಡಿರುವುದು ಮತ್ತು ತಡೆಗೋಡೆ ಕುಸಿದ ಸ್ಥಳಗಳಲ್ಲಿ ಮರಳಿನ ಚೀಲ ಪೇರಿಸಿ, ಬಣ್ಣದ ರಿಬ್ಬನ್‌ ಕಟ್ಟಿ ಎಚ್ಚರಿಕೆ ನೀಡಿರುವುದರ ಹೊರತಾಗಿ ಯಾವ ಕೆಲಸವೂ ಆಗಿಲ್ಲ.ಇನ್ನು ಕೆಲವಡೆ ಟಿಪ್ಪರ್‌ಗಳ ಮುಖಾಂತರ ಕುಸಿದ ರಸ್ತೆಯ ಬದಿಯಲ್ಲಿ ಮಣ್ಣು ಸುರಿಯಲಾಗಿದ್ದು ಆದರೆ ಇದು ಮಳೆಗಾಲದಲ್ಲಿ ಉಳಿಯುವುದು ಅನುಮಾನವಾಗಿದೆ.

ಎತ್ತಿನ ಹೊಳೆ ಕಾಮಗಾರಿಯಿಂದ ಆಪತ್ತು: ಕಳೆದ ಬಾರಿ ಗುಡ್ಡ ಕುಸಿದಿದ್ದ ಬಹುತೇಕ ಸ್ಥಳಗಳಲ್ಲಿ ಈ ಬಾರಿಯೂ ಅಪಾಯದ ಸ್ಥಿತಿಯೇ ಇದೆ. ಅರ್ಧ ಜರಿದು ನಿಂತಿರುವ ಮಣ್ಣಿನ ರಾಶಿ, ಕಲ್ಲು ಬಂಡೆಗಳು ಕೆಳಕ್ಕೆ ಉರುಳಲು ಕಾದು ಕುಳಿತಿವೆ. ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ಕೆಲವು ಕಡೆ ಮಣ್ಣಿನ ರಾಶಿ ತುಸು ಕೆಳಕ್ಕೆ ಜಾರಿರುವುದು ಕಂಡುಬರುತ್ತಿದೆ. ಜೊತೆಗೆ ಬೃಹತ್‌ ಯಂತ್ರಗಳನ್ನು ಬಳಸಿ ಎತ್ತಿನಹೊಳೆ ಕಾಮಗಾರಿ ಸಹ ಅಲ್ಲಲ್ಲಿ ಹೆದ್ದಾರಿ ಬದಿ ಮಾಡುತ್ತಿರುವುದು ಮತ್ತಷ್ಟು ಆತಂಕ ತಂದಿದೆ.

Advertisement

ಏಕಮುಖ ಸಂಚಾರದಿಂದ ಟ್ರಾಫಿಕ್‌ ಜಾಮ್‌: ಕೆಲವೆಡೆ ಇನ್ನು ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಅವಕಾಶವಿದ್ದು, ಇದರಿಂದ ಹಲವು ಸಂದರ್ಭಗಳಲ್ಲಿ ಸರಾಗ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ವಾಹನಗಳ ದಟ್ಟಣಿಯುಂಟಾಗಿ ವಾಹನ ಚಾಲಕರು ತೊಂದರೆ ಅನುಭವಿಸಬೇಕಾಗಿದೆ. ಹೆದ್ದಾರಿಯುದ್ದಕ್ಕೂ ಮತ್ತೆ ಭೂಕುಸಿತ ಸಂಭವಿಸಿದಂತೆ ತಡೆಯುವ ಸಂಬಂಧ ಅಧ್ಯಯನ ನಡೆಸಿ, ವರದಿ ನೀಡಲು ಎರಡು ಸಮಿತಿಗಳನ್ನು ನೇಮಿಸಲಾಗಿತ್ತು. ಬೆಂಗಳೂ ರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಣ್ಣು ಎಂಜಿನಿಯರಿಂಗ್‌ ವಿಭಾಗದ ಪ್ರೊ.ಬಿ.ಆರ್‌. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ನೀಡಿದ್ದ ವರದಿ ಆಧರಿಸಿ, ಶಾಶ್ವತವಾಗಿ ಭೂಕುಸಿತ ತಡೆಗೆ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ ಈ ವರದಿಯನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಭರ್ಜರಿ ಮಳೆ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.

ಕೊನೆಯ ಹಂತದಲ್ಲಿ ಶಿರಾಡಿ ಘಾಟಿಯಲ್ಲಿ ಭೂಕುಸಿತ ತಡೆ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ತಾಲೂಕಿನಲ್ಲಿದ್ದ ರಾಷ್ಟ್ರೀಯ ಹೆದ್ದಾರಿ 75 ಉಪವಿಭಾಗದ ಕಚೇರಿ ಸ್ಥಳಾಂತರ ವಾಗಿದ್ದು ಈ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಕುರಿತು ಮಾಹಿತಿ ನೀಡುವವರೆ ಇಲ್ಲದಂತಾಗಿದೆ.

ಅಪಾಯಕಾರಿ ಸ್ಥಳದ ದುರಸ್ತಿ: ಹೆಸರು ಹೇಳಲು ಇಚ್ಛಿಸದ ಹೆದ್ದಾರಿ ಎಂಜಿನಿಯರ್‌ ಒಬ್ಬರು ದೂರ ವಾಣಿಯಲ್ಲಿ ಮಾತನಾಡಿ, ಈಗಾಗಲೇ 3 ಅಪಾ¿ ುಕಾರಿ ಸ್ಥಳಗಳನ್ನು ದುರಸ್ತಿ ಮಾಡಲಾಗಿದ್ದು 4ನೇ ಅಪಾಯಕಾರಿ ಸ್ಥಳವನ್ನು ಇದೀಗ ದುರಸ್ತಿ ಮಾಡಲಾಗುತ್ತಿದೆ. ಕೆಲವೊಂದು ಕಾರಣಗಳಿಂದ ಕಾಮಗಾರಿ ತಡವಾಗಿ ಆಗುತ್ತಿದೆ ಎಂದರು.

● ಸುಧೀರ್‌ ಎಸ್‌.ಎಲ್

Advertisement

Udayavani is now on Telegram. Click here to join our channel and stay updated with the latest news.

Next