Advertisement

ಮುಂಬೈಯಲ್ಲಿ ಮತ್ತೆ ಧಾರಾಕಾರ ಮಳೆ, ತಗ್ಗು ಪ್ರದೇಶ ಜಲಾವೃತ; ಬೀಚ್ ಗೆ ತೆರಳದಂತೆ ಎಚ್ಚರಿಕೆ

09:16 AM Aug 04, 2019 | Nagendra Trasi |

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರಿದಿದ್ದು, ಗೋರೆಗಾಂವ್, ಕಾಂದಿವಲಿ ದಹಿಸರ್ ಸೇರಿದಂತೆ ಪ್ರಮುಖ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿರುವುದಾಗಿ ವರದಿ ತಿಳಿಸಿದೆ.

Advertisement

ರೈಲ್ವೆ ಹಳಿಗಳು ಜಲಾವೃತಗೊಂಡ ಪರಿಣಾಮ ಲೋಕಲ್ ರೈಲು ಸಂಚಾರ 15ರಿಂದ 20 ನಿಮಿಷಗಳ ಕಾಲ ತಡವಾಗಿ ಆಗಮಿಸಿದೆ. ಮುಂಜಾಗ್ರತ ಕ್ರಮವಾಗಿ ರೈಲುಗಳು ಎಚ್ಚರಿಕೆಯ ವೇಗದಲ್ಲಿ ಚಲಿಸಲು ಸೂಚನೆ ನೀಡಲಾಗಿದೆ ಎಂದು ರೈಲ್ವೆ ವ್ಯವಹಾರಗಳ ಮುಖ್ಯ ಅಧಿಕಾರಿ ಸುನೀಲ್ ಉದಾಸಿ ಮಾಹಿತಿ ನೀಡಿದ್ದಾರೆ.

ವಿಮಾನ ಸಂಚಾರ ಎಂದಿನಂತೆ ಮುಂದುವರಿದಿದ್ದು, ಈವರೆಗೂ ಯಾವುದೇ ಅಡಚಣೆ ಉಂಟಾಗಿಲ್ಲ ಎಂದು ವರದಿ ವಿವರಿಸಿದೆ. ಶನಿವಾರ ಮಧ್ಯಾಹ್ನ ಕರಾವಳಿ ಪ್ರದೇಶದಲ್ಲಿ 4.90 ಮೀಟರ್ ನಷ್ಟು ಅಲೆಗಳ ಮೇಲೆಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರು, ಜನಸಾಮಾನ್ಯರು ಬೀಚ್ ಗಳಿಗೆ ತೆರಳದಂತೆ ಮನವಿ ಮಾಡಿಕೊಂಡಿದೆ.

ಮುಂಬೈ ಸೇರಿದಂತೆ ಉತ್ತರ ಕೊಂಕಣ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಎಲ್ಲಾ ಸರಕಾರಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next