Advertisement

ನಿಖಿಲ್‌ ವಿವಾಹ: ವರದಿ ಕೇಳಿದ ಹೈಕೋರ್ಟ್‌

12:34 PM Apr 30, 2020 | mahesh |

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ವಿವಾಹ ಸಮಾರಂಭ ಸಂಬಂಧ ಎಷ್ಟು ವಾಹನ ಪಾಸ್‌ ನೀಡಲಾಗಿತ್ತು? ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತೇ? ಎಂಬ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

Advertisement

ಈ ಸಂಬಂಧ ಸಲ್ಲಿಸಲಾಗಿರುವ ಪಿಐಎಲ್‌ನ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ನಿಖಿಲ್‌ ವಿವಾಹದಲ್ಲಿ ಎಷ್ಟು ಜನ ಭಾಗವಹಿಸಿದ್ದರು? ಸಾಮಾಜಿಕ ಅಂತರ ಕಾಯ್ದುಕೊಳ್ಳ ಲಾಗಿತ್ತೇ? ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಎ. 21ರಂದೇ ಸೂಚಿಸಿತ್ತು. ಆದರೆ ಸರಕಾರ ಇನ್ನೂ ವರದಿ ಸಲ್ಲಿಸಿಲ್ಲ. ವಿವಾಹ ಸಂಬಂಧ ನೀಡಲಾದ ವಾಹನ ಪಾಸ್‌ಗಳ ದುರ್ಬಳಕೆ ಬಗ್ಗೆಯೂ ದೂರು ಬಂದಿದ್ದು, ಯಾವ ಕ್ರಮ ಜರಗಿಸಲಾಗಿದೆ ಎಂಬ ಬಗ್ಗೆ ಮೇ 5ರಂದು
ಲಿಖಿತವಾಗಿ ವರದಿ ಸಲ್ಲಿಸುವಂತೆ ನಿರ್ದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next