Advertisement

31ಕ್ಕೆ ನಾಗಾ ಶಾಂತಿ ಮಾತುಕತೆ: 2 ರಾಜ್ಯದಲ್ಲಿ ಹೈಅಲರ್ಟ್‌

09:48 AM Oct 27, 2019 | Team Udayavani |

ಕೋಹಿಮಾ: ಕಳೆದ 7 ದಶಕದಿಂದ ಇತ್ಯರ್ಥವಾಗದೇ ಉಳಿದಿರುವ ನಾಗಾಲ್ಯಾಂಡ್‌ ವಿವಾದಕ್ಕೆ ಸಂಬಂಧಿಸಿ 31ರಂದು ಕೇಂದ್ರ ಸರ್ಕಾರ ನಿರ್ಣಾಯಕ ಶಾಂತಿ ಮಾತುಕತೆ ನಡೆಸಲಿದ್ದು, ಮಣಿಪುರ ಹಾಗೂ ನಾಗಾಲ್ಯಾಂಡ್‌ನ‌ಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಾತುಕತೆ ಬಳಿಕ ಯಾವುದೇ ಅವಘಡ ಸಂಭವಿಸದಂತೆ ಎರಡೂ ರಾಜ್ಯಗಳು ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Advertisement

ಮಾತುಕತೆಯಲ್ಲಿ ನಾಗಾಲ್ಯಾಂಡ್‌ ಪ್ರತ್ಯೇಕ ಧ್ವಜ ಹಾಗೂ ವಿಶೇಷ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುವಂತೆ ಬೇಡಿಕೆ ಇಡುವ ಸಾಧ್ಯತೆ ಇದೆ. ಈ ರಾಜ್ಯದಲ್ಲಿ ಈಗಾಗಲೇ ಕೆಲ ವಿಶೇಷ ಸ್ಥಾನಮಾನ ಇರುವುದರಿಂದ ಈ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪದಿರುವ ಸಾಧ್ಯತೆ ಇದೆ.

ಇತ್ತೀಚೆಗೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. ಆದರೆ, ನಾಗಾಲ್ಯಾಂಡ್‌ ವಿಷಯದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next