Advertisement

ವಿಜಯಪುರದ ಇಬ್ಬರಿಗೆ ಸೋಂಕು ಪತ್ತೆ ಹಿನ್ನಲೆ ಹಾವೇರಿಯ ಆಡೂರಿನಲ್ಲಿ ಕಟ್ಟೆಚ್ಚರ !

06:01 PM Apr 19, 2020 | keerthan |

ಹಾವೇರಿ: ದಿಲ್ಲಿ ಪ್ರಯಾಣದ ಹಿನ್ನಲೆಯಿದ್ದ ವಿಜಯಪುರದ ಇಬ್ಬರಿಗೆ ಕೊವಿಡ್-19 ಸೋಂಕು ಖಚಿತವಾಗುತ್ತಿದ್ದಂತೆ ಹಾವೇರಿ ಜಿಲ್ಲೆಯ ಆಡೂರಿನಲ್ಲಿ ಕಟ್ಟೆಚ್ಚರ ಕೈಗೊಳ್ಳಲಾಗಿದೆ. ಕಾರಣವೇನೆಂದರೆ ಆ ಇಬ್ಬರು ಸೋಂಕಿತರು ದಿಲ್ಲಿಯಿಂದ ಬಂದೊಡನೆ ಆಡೂರಿನ ಸಂಬಂಧಿಕರ ಮನೆಗೆ ಊಟಕ್ಕೆಂದು ತೆರಳಿದ್ದರು ಎಂಬ ಮಾಹಿತಿ ವರದಿಯಾಗಿದೆ.

Advertisement

ದಿಲ್ಲಿಯಿಂದ ಬಂದಿದ್ದ ವಿಜಯಪುರದ ಇಬ್ಬರಿಗೆ (ಸೋಂಕಿತ ಸಂಖ್ಯೆ 306 ಮತ್ತು308) ಕೋವಿಡ್-19 ಸೋಂಕು ದೃಢವಾಗಿತ್ತು. ಸೋಂಕು ದೃಢವಾಗುವ ಮೊದಲು ಇವರಿಬ್ಬರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರಿನ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಹೋಗಿದ್ದರು.

ಸದ್ಯ ಇಬ್ಬರಲ್ಲಿ ಸೋಂಕು ಪತ್ತೆಯಾದ ಕಾರಣ ಆಡೂರಿನಲ್ಲಿ ಮುನ್ನಚ್ಚೆರಿಕೆಯ ಹೈ ಅಲರ್ಟ್ ಘೋಷಿಸಲಾಗಿದೆ. ಆಡೂರ ಗ್ರಾಮದ 21 ಜನರು ಕ್ವಾರಂಟೈನ್ ನಲ್ಲಿಡಲಾಗಿದೆ.

ಆಡೂರ ಪೋಲಿಸ್  ಠಾಣಾ ಪಿ ಎಸ್ ಐ ಆಂಜನೇಯ ಅವರು 21 ಜನರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next