Advertisement

ಶೋಪಿಯಾನ್‌ ಪ್ರಕರಣ: ಮೇಜರ್‌ ಆದಿತ್ಯಗೆ ಜಯ

07:30 AM Mar 06, 2018 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಎಫ್ಐಆರ್‌ನಲ್ಲಿ ಮೇಜರ್‌ ಆದಿತ್ಯಕುಮಾರ್‌ ಅವರ ಹೆಸರು ಸೇರಿಸಿಲ್ಲ ಎಂದು ರಾಜ್ಯ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆ ಸ್ಥಗಿತಗೊಳಿಸಿದೆ. ರಾಜ್ಯದ ಹೇಳಿಕೆ ದಾಖಲಿಸಿದ ಬಳಿಕ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ, “ಇನ್ನು ಏ.24ರವರೆಗೆ ಈ ಪ್ರಕರಣದ ವಿಚಾರಣೆ ನಡೆಯುವುದಿಲ್ಲ. ಅಂದೇ ಆದೇಶ ಹೊರಡಿಸಲಾಗುತ್ತದೆ’ ಎಂದಿದೆ. ಎಫ್ಐಆರ್‌ನಲ್ಲಿ ಸೇನಾಧಿಕಾರಿ ಹೆಸರಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ಹಿಂದೆ ಪೊಲೀಸರಿಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next