Advertisement

ಆರ್ಡರ್ಲಿ ವಿರುದ್ಧ ರೈಲ್ವೆ ಮಂತ್ರಿಗೆ ಪತ್ರ

09:15 AM Jul 18, 2018 | Team Udayavani |

ನವದೆಹಲಿ: ಆರ್ಡರ್ಲಿ ಪದ್ಧತಿ ವಿರುದ್ಧ ಧ್ವನಿ ಎತ್ತಿರುವ ಟ್ರ್ಯಾಕ್‌ ಮ್ಯಾನ್‌ ವೊಬ್ಬರು, ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ಗೆ ಪತ್ರ ಬರೆದಿದ್ದು, ‘ನಾನು ಹಾಗೂ ನನ್ನ ಸಹೋದ್ಯೋಗಿಗಳು ರೈಲ್ವೆಗಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ. ಅಧಿಕಾರಿಗಳ ಮನೆ ಕಟ್ಟುವ ಕೆಲಸ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

Advertisement

ವಿಭಾಗೀಯ ಎಂಜಿನಿಯರ್‌ ರಾಜ್‌ಕುಮಾರ್‌ ವರ್ಮಾ ಅವರು ತನ್ನನ್ನು ಸೇರಿದಂತೆ ಐವರು ಸಹೋದ್ಯೋಗಿಗಳನ್ನು ಮನೆ ಕಟ್ಟುವ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ನಾವು ರೈಲ್ವೆಗಾಗಿ ಕೆಲಸಕ್ಕೆ ಸೇರಿದ್ದೇವೆ, ಅಧಿಕಾರಿಗಳ ಸೇವೆ ಮಾಡಲಿಕ್ಕಲ್ಲ ಎಂದು ಹೇಳಿದ್ದಾರೆ. ಜೊತೆಗೆ ನೌಕರರು ಕೆಲಸ ಮಾಡುವ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್‌ ನಲ್ಲಿ ರೈಲ್ವೆ ಮಂತ್ರಿ ಪಿಯೂಷ್‌ ಗೋಯಲ್‌, ನೌಕರರನ್ನು ಮನೆಗೆಲಸಗಳಿಗೆ ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ಆರ್ಡರ್ಲಿ ಪದ್ಧತಿ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next