Advertisement

ದ.ಕ.: 9.8 ಲಕ್ಷ ಗಿಡ ನಾಟಿಗೆ ಯೋಜನೆ

03:04 PM May 20, 2019 | keerthan |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 950 ಹೆಕ್ಟೇರ್‌ ಪ್ರದೇಶದಲ್ಲಿ ಈ ವರ್ಷ ಸುಮಾರು 9.8 ಲಕ್ಷ ಗಿಡ ನೆಟ್ಟು ಬೆಳೆಸುವ ಗುರಿಯನ್ನು ಅರಣ್ಯ ಇಲಾಖೆ ಇರಿಸಿಕೊಂಡಿದೆ.

Advertisement

ಈ ಬಾರಿ ಮಳೆ ಬಂದ ಬಳಿಕ ಅಂದರೆ,  ಸುಮಾರು ಜೂನ್‌ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ 8 ವಲಯಗಳಲ್ಲಿ ಗಿಡ ನೆಡಲು ಪ್ರಾರಂಭ ಮಾಡಲಾಗುತ್ತದೆ. ಒಂದು ತಿಂಗಳು ಕಾಲ ಈ ಕಾರ್ಯ ನಡೆಯಲಿದೆ. ರಸ್ತೆ ಬದಿಗಳಲ್ಲಿಯೂ ಗಿಡ ನೆಡುವುದು ಈ ಯೋಜನೆಯಲ್ಲಿದ್ದು, ಜಿಲ್ಲೆಯ ಸುಮಾರು 60 ಕಿ.ಮೀ. ರಸ್ತೆ ಬದಿ ನೆಡಲಾಗುತ್ತದೆ. ಪ್ರತೀ ಕಿ.ಮೀಗೆ 300 ಗಿಡ ನೆಡುವ ಗುರಿಯನ್ನು ಇಲಾಖೆ ಹೊಂದಿದೆ.

ರಸ್ತೆ ಬದಿ ಪ್ಲಾಂಟಿಂಗ್‌ ಮತ್ತು ಗ್ರೀನಿಂಗ್‌ ಅರ್ಬನ್‌ ಏರಿಯಾ ಯೋಜನೆಯಡಿ ಜಿಲ್ಲೆಯ 60 ಕಿ.ಮೀ. ವ್ಯಾಪ್ತಿಯಲ್ಲಿ ಗಿಡ ನೆಡಲಾಗುತ್ತದೆ. ಅಲ್ಲದೆ ಈ ಬಾರಿ ರೈನ್‌ ಟ್ರೀ, ದೇವದಾರು ಗಿಡಗಳನ್ನು ನೆಡದಿರಲು ತೀರ್ಮಾನ ಮಾಡಿದೆ. ಇವು ದುರ್ಬಲ ಮರಗಳಾಗಿದ್ದು, ಗಾಳಿಗೆ ತುಂಡಾಗುತ್ತದೆ. ಇದೇ ಕಾರಣಕ್ಕೆ ಒಣ ವಲಯಗಳಲ್ಲಿ ಗೋಳಿ, ಅರಳಿ ಗಿಡ ನೆಡುವ ಯೋಚನೆ ಇಲಾಖೆಗಿದೆ.

ರಿಯಾಯಿತಿ ದರದಲ್ಲಿ ವಿತರಣೆ
ಅರಣ್ಯ ಇಲಾಖೆಯು ಈ ಬಾರಿ ಒಟ್ಟಾರೆ 9.8 ಲಕ್ಷ ಗಿಡ ನೆಡಲು ಯೋಜನೆ ರೂಪಿಸಿದ್ದು, ಇದರಲ್ಲಿ 3 ಲಕ್ಷ ಗಿಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಿದೆ. ಗಿಡಗಳನ್ನು ರಿಯಾಯಿತಿ ದರದಲ್ಲಿ ನೀಡಲಾ ಗುತ್ತದೆ. ಇನ್ನುಳಿದ ಗಿಡಗಳನ್ನು ಅರಣ್ಯ ಇಲಾಖೆಯೇ ನೆಡಲಿದೆ.

ಈ ವರ್ಷ ಅರಣ್ಯ ಇಲಾಖೆ ಯಿಂದ ಜಿಲ್ಲೆಯ 8 ವಲಯಗಳಲ್ಲಿ ಸುಮಾರು 9.8 ಲಕ್ಷದಷ್ಟು ಸಸಿ ನೆಡಲಾಗುತ್ತದೆ. ಜಿಲ್ಲೆಯ 950 ಹೆಕ್ಟೇರ್‌ನಲ್ಲಿ ನೆಡಲಾಗುತ್ತಿದೆ.
– ಕರಿಕಾಳನ್‌, ದ.ಕ. ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next