Advertisement

ತಾಯಿ ಸಾವು: ನೊಂದ ಮಗ ಆತ್ಮಹತ್ಯೆ

03:50 AM Feb 18, 2017 | Team Udayavani |

ಉಡುಪಿ/ಕಾಪು: ಕಟ್ಟಡದಿಂದ ಕಾಲುಜಾರಿ ಬಿದ್ದು ತಾಯಿ ಸಾವನ್ನಪ್ಪಿದ ಸುದ್ದಿ  ತಿಳಿದ ಮಗನೊಂದು  ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉದ್ಯಾವರದ ಬೊಳೆj – ಕೇದಾರ್‌ ಎನ್ನುವಲ್ಲಿ ಶುಕ್ರವಾರ ಸಂಭವಿಸಿದೆ.

Advertisement

ಕಡಿಯಾಳಿಯ ವಸತಿ ಮತ್ತು ವಾಣಿಜ್ಯ ಸಂಕೀರ್ಣವೊಂದರ ಗ್ರೌಂಡ್‌ ಫ್ಲೋರ್‌ನಲ್ಲಿದ್ದ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸಕ್ಕಿದ್ದ ಉದ್ಯಾವರದ ಕೇದಾರಬೈಲುವಿನ ಚೆಲುವರಾಜು ಅವರ ಪತ್ನಿ ರಾಜಶ್ರೀ (57) ಅವರು ಗುರುವಾರ ವಾಣಿಜ್ಯ ಕಟ್ಟಡದಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು, ತಾಯಿಯ ಸಾವಿನಿಂದ ನೊಂದ ಅವರ ಮಗ ಉಜ್ವಲ್‌ (30) ಶುಕ್ರವಾರ ಬೆಳಗ್ಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವಿವಾಹಿತ ಉಜ್ವಲ್‌ ಕೆಲವು ಸಮಯಗಳ ಹಿಂದೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಇತೀ¤ಚೆಗೆ ಅಂಗಡಿಯಲ್ಲಿ  ಕೆಲಸ ಮಾಡುತ್ತಿದ್ದರು. 

ರಾಜಶ್ರೀ ಅವರು 2-3 ದಿನದ ಹಿಂದೆಯಷ್ಟೇ ಕಡಿಯಾಳಿಯ ಹೊಟೇಲಿನಲ್ಲಿ ಹೆಲ್ಪರ್‌ ಆಗಿ  ಕೆಲಸಕ್ಕೆ ಸೇರಿಕೊಂಡಿದ್ದರು. 2 ದಿನ ಸರಿಯಾಗಿಯೇ ಕೆಲಸ ನಿರ್ವಹಿಸಿದ್ದರು. ಗುರುವಾರ ಬೆಳಗ್ಗೆ ಕೆಲಸಕ್ಕೆ ಬರುವಾಗಲೇ ಬಳಲಿದಂತೆ ಕಂಡಬಂದಿದ್ದು, ಮಧ್ಯಾಹ್ನ ಊಟವಾದ ಬಳಿಕ ಅವರನ್ನು ಕರೆದೊಯ್ಯಲು ರಿಕ್ಷಾ ತರಲೆಂದು ಹೊಟೇಲಿನವರು ಹೋದಾಗ ಹಿಂದೆಯೇ ವಾಲಿಕೊಂಡು ಬಂದ ಅವರು ಆಯತಪ್ಪಿ ಬೇಸ್‌ಮೆಂಟ್‌ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next