Advertisement

Dehradun: ಭಕ್ತಾದಿಗಳ ದರ್ಶನಕ್ಕೆ ತೆರೆದ ಹೇಮಕುಂಡ ಸಾಹಿಬ್‌ನ ದ್ವಾರ

10:49 PM May 20, 2023 | Shreeram Nayak |

ಡೆಹ್ರಾಡೂನ್‌: ಉತ್ತರಾಖಂಡದ ಗರ್ವಾಲ್‌ ಹಿಮಾಲಯದಲ್ಲಿರುವ ಸಿಖ್ಖರ ಪವಿತ್ರಕ್ಷೇತ್ರ ಹೇಮಕುಂಡ ಸಾಹಿಬ್‌ನ ದ್ವಾರವನ್ನು ಶನಿವಾರ ತೆರಯಲಾಗಿದ್ದು, ಗುರುದ್ವಾರ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Advertisement

ಚಳಿಗಾಲದಲ್ಲಿ ಗುರುದ್ವಾರ ಸಂಪೂರ್ಣ ಹಿಮಾವೃತವಾಗಿರುವ ಹಿನ್ನೆಲೆ ಆ ವೇಳೆ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಿರಲಾಗುತ್ತದೆ. ಈಗ ಮತ್ತೆ ದ್ವಾರ ತೆರೆದಿರುವ ಹಿನ್ನೆಲೆ ಮೊದಲ ದಿನವೇ 2 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ ದರ್ಶನ ಪಡೆದುಕೊಂಡಿದ್ದಾರೆ.

ಭಕ್ತಾದಿಗಳ ಮೊದಲ ತಂಡ ಮೇ 17ರಂದೇ ಪಾದಯಾತ್ರೆ ಆರಂಭಿಸಿ ಆಗಮಿಸಿದ್ದು, ಯಾತ್ರೆಗೆ ರಿಷಿಕೇಶದಲ್ಲಿ ರಾಜ್ಯಪಾಲ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಗುರ್ಮೀತ್‌ ಸಿಂಗ್‌ ಚಾಲನೆ ನೀಡಿದ್ದರು. ಹೇಮಕುಂಡದಲ್ಲಿ ನಡೆಯುತ್ತಿರುವ ಪ್ರಾರ್ಥನೆಯನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನೇರಪ್ರಸಾರ ಮಾಡಲಾಗಿತ್ತು ಎಂದು ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next