Advertisement

ಕ್ಯಾನ್ಸರ್‌ ಪೀಡಿತ ಮಗುವಿನ ಚಿಕಿತ್ಸೆಗೆ ಧನ ಸಹಾಯ

07:45 AM Aug 18, 2017 | Team Udayavani |

ಉಡುಪಿ: ಶಿವಮೊಗ್ಗ ಜಿಲ್ಲೆಯ ಶಾಹಿನಾ ಅವರ ಪುತ್ರಿ ಮೆಹಕ್‌ ಕ್ಯಾನ್ಸರ್‌ ಚಿಕಿತ್ಸೆಗೆ ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿಗಳಿಂದ ಆ. 17ರಂದು 1.12 ಲ.ರೂ. ಚೆಕ್‌ ವಿತರಿಸಲಾಯಿತು.

Advertisement

ಚಿಕಿತ್ಸೆಗೆ ಸುಮಾರು ಹತ್ತು ಲಕ್ಷ ರೂಪಾಯಿ ಅಗತ್ಯವಿದೆ ಎಂದು ಶಾಹಿನಾ ಕುಟುಂಬ ತಿಳಿಸಿದೆ. ಈ ಪೈಕಿ ತಮ್ಮ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮಾನವೀಯತೆಯನ್ನು‌ ಮೆರೆದು 1.12 ಲ.ರೂ. ಸಂಗ್ರಹವಾಗಿದೆ. ವಿದ್ಯಾರ್ಥಿಗಳ ಈ ಕಾಳಜಿ ಬಗ್ಗೆ ತಮಗೆ ಅಭಿಮಾನವಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕುಸುಮಾ ಕಾಮತ್‌ ಹೇಳಿದರು. ಫ್ರ್ಯಾಗ್ರಾನ್ಸ್‌ ಆಫ್ ಹುಮ್ಯಾನಿಟಿಯ ನೇತೃತ್ವದಲ್ಲಿ ಅಖೀಲ ಕಾಲೇಜು ವಿದ್ಯಾರ್ಥಿ ಯೂನಿಯನ್‌ ಸೇರಿ ಧನ ಸಂಗ್ರಹದ ಮುತುವರ್ಜಿ ವಹಿಸಿದ್ದವು. ಇದೇ ಸಂದರ್ಭದಲ್ಲಿ “ರೈನ್‌ಬೋ’ ಸಂಸ್ಥೆಯಿಂದಲೂ 15 ಸಾವಿರ ರೂಪಾಯಿ ಧನ ಸಹಾಯವನ್ನು ಮಾಡಲಾಯಿತು.

ಪ್ರಾಧ್ಯಾಪಕ ಪ್ರೊ| ಮಯ್ಯ, ಉಪನ್ಯಾಸಕರಾದ ಸುಚೀತ್‌ ಕೋಟ್ಯಾನ್‌, ಮಂಜುನಾಥ ಕಾಮತ್‌, ವಿದ್ಯಾರ್ಥಿ ನಾಯಕರುಗಳಾದ ವಿಘ್ನೇಶ್‌ ಭಟ್‌, ಶ್ರೀಕಾಂತ ಪೈ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next