Advertisement

ಉಪಕಾರ ಸ್ಮರಣೆ

10:12 PM Jul 06, 2019 | mahesh |

ವೇಗವಾಗಿ ಬರುತ್ತಿರುವ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್‌. ಗರ್ವದಿಂದ ಚಾಲಕನ ಸೀಟಿನತ್ತ ಬರುತ್ತ ಡ್ರೈವಿಂಗ್‌ ಲೈಸನ್ಸ್‌ ತೋರಿಸುವಂತೆ ಕೇಳಿದ. ಆತ ಕಂದಾಯ ಇಲಾಖೆಯ ಉದ್ಯೋಗಿ. ಎಲ್ಲ ಕಾಗದ ಪತ್ರಗಳನ್ನು ತೋರಿಸಿದ. ಇನ್ಶೂರೆನ್ಸ್‌ ಮಾತ್ರ ಲ್ಯಾಪ್ಸ್‌ ಆಗಿತ್ತು.  ಪೊಲೀಸ್‌, ಕಂದಾಯ ಇಲಾಖೆಯ ಉದ್ಯೋಗಿಯ ಮುಖ ನೋಡಿದ. ಪರಸ್ಪರ ನಕ್ಕರು. “ಸರಿ, ಹೋಗಿ’ ಎಂದು ಪೊಲೀಸ್‌ ಅವನನ್ನು ಬಿಟ್ಟ. ಮತ್ತೂಮ್ಮೆ ಪೊಲೀಸ್‌ನ ಮಗನಿಗೆ ಅರ್ಜೆಂಟಾಗಿ ಜಾತಿ ಪ್ರಮಾಣ ಪತ್ರ ಬೇಕಾಗಿತ್ತು. ಆಫೀಸ್‌ ಕಡೆ ಹೋದರೆ ಅಲ್ಲಿನ ಅಲ್ಲಿದ್ದ ಸಿಬಂದಿ “ಒಂದು ವಾರ ಬೇಕಾಗುತ್ತದೆ. ಈಗ ಕಂಪ್ಯೂಟರೈಸ್ಡ್ ಆಗಿರೋದ್ರಿಂದ ಎಲ್ಲ ಶಿಸ್ತುಬದ್ಧವಾಗಿ ನಡೀತಿದೆ’ ಎಂದು ಹೇಳಿದರು.

Advertisement

ಈ ಹಿಂದೆ ತನ್ನ “ಔದಾರ್ಯ’ದ ಲಾಭವನ್ನು ಪಡೆದಿದ್ದ ಕಂದಾಯ ಇಲಾಖೆಯ ಉದ್ಯೋಗಿಯ ನೆನಪಾಯಿತು. ಅವನನ್ನು ಭೇಟಿಯಾದ. ಇಬ್ಬರೂ ಪರಸ್ಪರ ಮುಖ ನೋಡಿ ನಕ್ಕರು.  ಆತನಲ್ಲಿ ಉಪಕಾರ ಸ್ಮರಣೆ ಇತ್ತು. ಆ ದಿನ ಸಂಜೆಯೇ ಜಾತಿ ಪ್ರಮಾಣ ಪತ್ರ ಪೊಲೀಸನ ಕೈ ಸೇರಿತು. ರೂಲ್ಸ್‌ ಪಾಲಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ರೂಲ್ಸ್‌ ಬ್ರೇಕ್‌ ಮಾಡುವುದರಿಂದಲೂ ಎಷ್ಟೆಲ್ಲ ಪ್ರಯೋಜನ ಇದೆ ನೋಡಿ, ಯಾರಿಗೆಲ್ಲ ಎಂದು ಕೇಳಬೇಡಿ !

ಭೋಜರಾಜ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next