Advertisement

ಎಬಿವಿಪಿ ಘಟಕದಿಂದ ಪೂಜಾ ಶ್ರೀಗೆ ನೆರವು ಯಾಚನೆ

12:46 PM Apr 27, 2018 | Team Udayavani |

ಸುಬ್ರಹ್ಮಣ್ಯ: ಇಲ್ಲಿನ ಪದವಿ ಪೂರ್ವ ಕಾಲೇಜು ಪ್ರಥಮ ವರ್ಷದ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂಜಾಶ್ರೀ ಲ್ಯುಕೇಮಿಯಾ  (ಬ್ಲಿಡ್‌ ಕ್ಯಾನ್ಸರ್‌) ದಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Advertisement

ಆಕೆಯ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಚಿಕಿತ್ಸೆಗೆ ತಗಲುವ ಬೃಹತ್‌ ಪ್ರಮಾಣದ ವೆಚ್ಚವನ್ನು ಭರಿಸಲಾಗದೆ, ಆಕೆಯ ಹೆತ್ತವರು ನೆರವಿಗಾಗಿ ಮನವಿ ಮಾಡಿದ್ದಾರೆ. ಪೂಜಾಶ್ರೀಯ ಚಿಕಿತ್ಸೆಗೆ ನೆರವಾಗಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸುಬ್ರಹ್ಮಣ್ಯ ಘಟಕದ ವಿದ್ಯಾರ್ಥಿಗಳು ಗುತ್ತಿಗಾರು ಪರಿಸರದಲ್ಲಿ ಧನಸಹಾಯ ಯಾಚಿಸಿದರು. ಸಂಗ್ರಹವಾಗುವ ಮೊತ್ತವನ್ನು ವಿದ್ಯಾರ್ಥಿನಿಯ ಹೆತ್ತವರಿಗೆ ತಲುಪಿಸುವುದಾಗಿ ಎಬಿವಿಪಿ ಪ್ರಮುಖರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next