Advertisement

ಗುಡಿಸಲು ಭಸ್ಮ-ಸಂತ್ರಸ್ತರಿಗೆ ಧನ ಸಹಾಯ

12:51 PM Dec 11, 2021 | Team Udayavani |

ನಾರಾಯಣಪುರ: ಸಮೀಪದ ಜಂಗಿನಗಡ್ಡಿ ಗ್ರಾಮದಲ್ಲಿ ಬೆಂಕಿ ಅವಘಡದಲ್ಲಿ ಗುಡಿಸಲೊಂದು ಸುಟ್ಟು ಭಸ್ಮವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಯುವ ಮುಖಂಡ ಬಬಲುಗೌಡ ಭೇಟಿ ನೀಡಿ ಬೆಂಕಿಗಾಹುತಿಯಿಂದ ಗುಡಿಸಲು ಕಳೆದುಕೊಂಡ ಹುಲಗಪ್ಪ ಮಾದರ ಕುಟುಂಬಸ್ತರಿಗೆ ವೈಯಕ್ತಿಕ ಧನ ಸಹಾಯ ನೀಡಿ, ಸಾಂತ್ವನ ಹೇಳಿದರು.

Advertisement

ಈ ವೇಳೆ ಯುವ ಮುಖಂಡ ಬಬಲುಗೌಡ ಮಾತನಾಡಿ, ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಿಂದ ಅಪಾರ ಹಾನಿಯಾಗಿದ್ದು, ಸರ್ಕಾರದಿಂದಲೂ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಗುತ್ತಿಗೆದಾರ ಬಿ.ಎಂ. ಪೊಲೀಸ್‌ ಪಾಟೀಲ, ಪ್ರಮುಖರಾದ ವೈ.ಸಿ. ಗೌಡರ, ಆಂಜನೇಯ ದೊರೆ, ಶಿವಪ್ಪ ಬಿರಾದಾರ, ಆರ್‌.ಸಿ ಗೌಡರ, ಯಂಕಪ್ಪ ರೋಡಲಬಂಡಾ, ಗದ್ದಿನಗೌಡ ಮಾಲಿಗೌಡ, ಯಮನಪ್ಪ ಅಂಬಿಗೇರ, ಶಿವಪ್ಪ ಗೆದ್ದಲಮರಿ, ಗೋಪಾಲ ಯರಡೋಣಿ, ಲಕ್ಕಪ್ಪ ಮಟಲರ್‌, ಬಸಣ್ಣ ಮೆಂಬರ್‌, ಮಕºಲ್‌ ಸಾಬ್‌ ಮೇಲಿಗಡ್ಡಿ, ಶಿವಯ್ಯ ಸ್ವಾಮಿ, ಬಡೇಸಾಬ್‌, ಗ್ರಾಮ ಲೆಕ್ಕಿಗ ಬಂದೇನವಾಜ್‌ ಹಾಗೂ ಜಂಗಿನಗಡ್ಡಿ, ಮೇಲಿನಗಡ್ಡಿ ಗ್ರಾಮಗಳ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next