Advertisement

ಹಣವನ್ನು ದ್ವಿಗುಣ ಮಾಡುವ ಆಮಿಷ : ಜನರಿಗೆ 600 ಕೋಟಿ ರೂ.ವಂಚಿಸಿದ ಕಾಪ್ಟರ್‌ ಬ್ರದರ್ಸ್‌

02:29 AM Aug 07, 2021 | Team Udayavani |

ಚೆನ್ನೈ: ಹಣವನ್ನು ದ್ವಿಗುಣ ಮಾಡುವ ವಾಗ್ಧಾನ ನೀಡಿ ಹಲವಾರು ಮಂದಿಗೆ 600 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಕುಂಭಕೋಣಂನ “ಹೆಲಿಕಾಪ್ಟರ್‌ ಸಹೋದರರು’ ಎಂದು ಕುಖ್ಯಾತಿ ಪಡೆದಿದ್ದ ಇಬ್ಬರನ್ನು ಬಂಧಿಸಲಾಗಿದೆ.

Advertisement

ಅವರನ್ನು ಎಂಆರ್‌ ಗಣೇಶ್‌ ಮತ್ತು ಎಂಆರ್‌ ಸ್ವಾಮಿನಾಥನ್‌ ಎಂದು ಗುರುತಿಸಲಾಗಿದೆ. ವಿಕ್ಟರಿ ಫೈನಾನ್ಸ್‌ ಹೆಸರಿನ ಹಣಕಾಸು ಸಂಸ್ಥೆ ಮೂಲಕ ಒಂದು ವರ್ಷದ ಅವಧಿಯಲ್ಲಿ ಹೂಡಿಕೆ ಮಾಡಿದ ಹಣದ ದುಪ್ಪಟ್ಟು ಮೌಲ್ಯ ಕೊಡುವುದಾಗಿ ನಂಬಿಸಿದ್ದರು.

ಅದನ್ನು ನಂಬಿ ನೂರಾರು ಮಂದಿ ಹೂಡಿಕೆ ಮಾಡಿದ್ದರು. ಸೋಂಕು ವ್ಯಾಪಕವಾದ ಬಳಿಕ ಸಂಸ್ಥೆ ಯಲ್ಲಿ ಹೂಡಿಕೆ ಮಾಡಿದವರಿಗೆ ಹಣ ವಾಪಸ್‌ ಮಾಡುವುದನ್ನು ನಿಲ್ಲಿಸಿದ್ದರು. ಫಿರೋಜ್‌ ಬಾನು ಮತ್ತು ಝಫ‌ರುಲ್ಲಾ ದಂಪತಿ ಸಂಸ್ಥೆ ವಿರುದ್ಧ ದೂರು ನೀಡಿದ್ದರು. ಅವರು 15 ಕೋಟಿ ರೂ. ಹೂಡಿಕೆ ಮಾಡಿದ್ದರು.

2019ರಲ್ಲಿ ಎಂ.ಆರ್‌.ಗಣೇಶ್‌ ಪುತ್ರನ ಹುಟ್ಟಿದ ಹಬ್ಬಕ್ಕೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಮಾಡಿಸಿ ಕೊಂಡಿದ್ದರು. ಹೀಗಾಗಿ ಸಹೋ ದರರಿಗೆ ಹೆಲಿಕಾಪ್ಟರ್‌ ಸಹೋ ದರರು ಎಂಬ ಹೆಸರು ಅಂಟಿಕೊಂಡಿತು. 2019ರಲ್ಲಿ ಅರ್ಜುನ್‌ ಏವಿ ಯೇ ಶನ್‌ ಪ್ರೈ.ಲಿ. ವೈಮಾನಿಕ ಸಂಸ್ಥೆ ಆರಂಭಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next