Advertisement

ಕ್ರೂಸ್‌ ಪ್ರವಾಸಿಗರಿಗೆ ಹೆಲಿ ಟೂರಿಸಂ ಸೌಲಭ್ಯದ ಪ್ರಸ್ತಾವ: ಎ.ವಿ. ರಮಣ್‌

07:56 PM Oct 04, 2019 | mahesh |

ಪಣಂಬೂರು: ನವಮಂಗಳೂರು ಬಂದರಿಗೆ ಕ್ರೂಸ್‌ (ಹಡಗು)ಗಳಲ್ಲಿ ಬರುವ ವಿದೇಶೀ ಪ್ರವಾಸಿಗರಿಗೆ ಜಿಲ್ಲೆಯೊಳಗಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿ ಟೂರಿಸಂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಜತೆ ಚರ್ಚಿಸಲಾಗುವುದು ಎಂದು ಬಂದರು ಮಂಡಳಿ ಚೇರ್‌ಮನ್‌ ಎ.ವಿ. ರಮಣ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಹೆಲಿ ಟೂರಿಸಂಗೆ ಆದ್ಯತೆ ನೀಡಿದರೆ ಎನ್‌ಎಂಪಿಟಿ ಮೂಲಕ ಆಗಮಿಸುವ ಪ್ರವಾಸಿಗರು 150 ಕಿ.ಮೀ. ವ್ಯಾಪ್ತಿಯ ಕೊಡಗು, ಚಿಕ್ಕಮಗಳೂರು ಸಹಿತ ದ.ಕ., ಉಡುಪಿಯ ಪ್ರಮುಖ ಪ್ರವಾಸಿ ಸ್ಥಳಗಳ ವೀಕ್ಷಣೆ ಮಾಡಬಹುದಾಗಿದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ. 2019-20ನೇ ಸಾಲಿನಲ್ಲಿ ಮೂರು ಹಡಗುಗಳು ನೋಂದಾಯಿಸಿವೆ, ಕನಿಷ್ಠ ಪ್ರವಾಸಿಗರನ್ನು ಹೊತ್ತ 26 ಹಡಗುಗಳು ಆಗಮಿಸುವ ನಿರೀಕ್ಷೆ ಇದೆ ಎಂದರು.

ಧೂಳು ಮುಕ್ತ ಬೀಚ್‌ ರಸ್ತೆ
ಎನ್‌ಎಂಪಿಟಿ ಯಾರ್ಡ್‌ಗೆ ಲಾರಿಗಳಲ್ಲಿ ಬರುವ ಸರಕನ್ನು ಅತ್ಯಾಧುನಿಕ ವ್ಯವಸ್ಥೆ ಮೂಲಕ ನಿರ್ವಹಿಸಲಿದ್ದು, ಪಣಂಬೂರು ಬೀಚ್‌ ರಸ್ತೆ ಧೂಳು ಮುಕ್ತವಾಗಲಿದೆ.

ಸಮುದ್ರದಲ್ಲಿ ತ್ಯಾಜ್ಯ ಚೆಲ್ಲುವ ಹಡಗುಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಚೆಲ್ಲುವ ಸಮಸ್ಯೆಗಳಿಂದ ತೈಲದುಂಡೆಗಳು ಸಮುದ್ರ ತೀರಕ್ಕೆ ಕೆಲವು ಬಾರಿ ಅಪ್ಪಳಿಸುತ್ತವೆ. ಈ ಬಾರಿ ಇದು ಕನಿಷ್ಠ ಮಟ್ಟದ
ಲ್ಲಿತ್ತು ಎಂದರು. ಮುಳುಗಿರುವ ಡ್ರೆಜ್ಜರ್‌ನಲ್ಲಿರುವ ತೈಲವನ್ನು ಹೊರತೆಗೆಯಲು ಡ್ರೆಜ್ಜರ್‌ ಸಂಸ್ಥೆ ಪೂರಕ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next