Advertisement

Hebri: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆಗೆ ಯತ್ನ

11:38 PM Feb 21, 2024 | Team Udayavani |

ಹೆಬ್ರಿ: ಬೇಳಂಜೆ ಪರಿಸರದಲ್ಲಿ ದೂರಿನ ಮೇರೆಗೆ ಕರ್ತವ್ಯಕ್ಕೆ ತೆರಳಿದ ಹೆಬ್ರಿ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

Advertisement

ಬೇಳಂಜೆ ಹೊಸಮನೆ ನಿವಾಸಿ ರಾಜೇಶ ದರಲೆ ರಾಶಿಗೆ ಬೆಂಕಿ ಹಾಕುತ್ತಿರುವ ಬಗ್ಗೆ ದೂರಿನ ಮೇರೆಗೆ ವಿಚಾರಣೆಗೆ ತೆರಳಿದ ಹೆಬ್ರಿ ಠಾಣಾ ಹೆಡ್‌ ಕಾನ್ಸ್‌ಟೆಬಲ್‌ ರಶ್ಮಿ ಅವರಿಗೆ ರಾಜೇಶ್‌ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ರಶ್ಮಿ ಹಾಗೂ ಚಾಲಕ ಆನಂದ ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಾಗುಡ್ಡೆ : ಮಹಿಳೆ ನೇಣು ಬಿಗಿದು ಆತ್ಮಹತ್ಯೆ
ಹೆಬ್ರಿ: ಹೆಬ್ರಿ ಬಡಾಗುಡ್ಡೆ ನಿವಾಸಿ ಉಷಾ (30) ಅವರು ಮಾನಸಿಕವಾಗಿ ನೊಂದು ಫೆ. 19ರಂದು ರಾತ್ರಿ ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next