Advertisement

Hebri ನಾಡ್ಪಾಲು: ನೀರುಪಾಲಾದ ವ್ಯಕ್ತಿಗಾಗಿ ಶೋಧ

12:17 AM Jul 20, 2024 | Team Udayavani |

ಹೆಬ್ರಿ: ನಾಡ್ಪಾಲು ಗ್ರಾಮದ ಉಗ್ರಾಣಿಬೆಟ್ಟು ಎಂಬಲ್ಲಿ ಹೊಳೆ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ವ್ಯಕ್ತಿಗಾಗಿ ಜು.19ರಂದು ಅಗ್ನಿಶಾಮಕದವರು ಸಿಬಂದಿಯೊಂದಿಗೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

Advertisement

ಕೂಲಿ ಕಾರ್ಮಿಕರಾಗಿದ್ದ, ತಿಪಟೂರು ಮೂಲದ 55 ವರ್ಷದ ಆನಂದ ಅವರು ಜು. 18ರಂದು ನದಿ ದಾಟುವಾಗ ನೀರುಪಾಲಾಗಿದ್ದರು. ಸ್ಥಳಕ್ಕೆ ಸಹಾಯಕ ಕಮಿಷನರ್‌ ರಶ್ಮಿ, ಹೆಬ್ರಿ ತಹಶೀಲ್ದಾರ್‌ಪ್ರಸಾದ್‌ ಎಸ್‌. ಎ. ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next