Advertisement

Hebri; ಮುದ್ರಾಡಿ: ವರದಕ್ಷಿಣೆ ಕಿರುಕುಳ, ದೂರು ದಾಖಲು

10:00 PM Feb 17, 2024 | Team Udayavani |

ಹೆಬ್ರಿ: ಮುದ್ರಾಡಿ ಗ್ರಾಮದ ಸಂದೇಶ ಅವರ ಪತ್ನಿ ಸೃತಿ ಅವರು ತನ್ನ ಗಂಡ ಸೇರಿದಂತೆ ಮನೆಯವರು ವರದಕ್ಷಿಣೆಗಾಗಿ ಕಿರಿಕುಳ ನೀಡುತ್ತಿದ್ದಾರೆ ಎಂದು ಹೆಬ್ರಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

Advertisement

ಮದುವೆಯ ಸಮಯ ಗಂಡನ ಮನೆಯವರ ಬೇಡಿಕೆಯಂತೆ ಐದು ಲಕ್ಷ ರೂ., ಹಾಗೂ ಕರಿಮಣಿ ಸರ, ಎರಡು ಬಳೆ, ಚೈನ್‌, ಎರಡು ಕಿವಿಯ ಓಲೆ, ಬ್ರಾಸ್ಲೆಟ್‌, ಉಂಗುರಗಳನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆಬಳಿಕ ಗಂಡ ತನ್ನ ಬೆಂಗಳೂರಿನ ಶ್ರೀನಗರದಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಮದ್ಯ ಸೇವನೆ ಮಾಡಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತಿದ್ದರು. ಮಾತ್ರವಲ್ಲದೇ ಕರಿಮಣಿ ಸರ ಸಹಿತ ಚಿನ್ನಾಭರಣವನ್ನು ಒತ್ತೆಯಿಟ್ಟು ಪಡೆದ ಸಾಲವನ್ನು ಪಾವತಿಸಿಲ್ಲ.

ಗರ್ಭಿಣಿ ಸಮಯ ತವರಿನಲ್ಲಿ ಇದ್ದಾಗ ಹೆಚ್ಚಿನ ವರದಕ್ಷಿಣೆ ತಂದರೆ ಮಾತ್ರ ಬಾ ಎಂದು ಗದರಿಸಿದ್ದರು ಎಂದವರು ದೂರಿನಲ್ಲಿ ತಿಳಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next