Advertisement

Hebri: ಕುಚ್ಚಾರು, ಮಾತ್ಕಲ್‌: ಆನೆ ಹಾವಳಿ; ಕೃಷಿಗೆ ಹಾನಿ

12:19 AM Sep 26, 2024 | Team Udayavani |

ಹೆಬ್ರಿ: ತಾಲೂಕಿನ ಕುಚ್ಚಾರು ಪರಿಸರದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ.

Advertisement

ನಾಡ್ಪಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೋಮೇಶ್ವರ ಅಭಯಾರಣ್ಯದ ಪರಿಸರದಲ್ಲಿ 4 ತಿಂಗಳಿಂದ ಆನೆ ಸಂಚರಿ ಸುತ್ತಿದ್ದು, ಈಗ ಕುಚ್ಚಾರು ಮಾತ್ಕಲ್‌ ಪ್ರದೇಶಕ್ಕೂ ಧಾಂಗುಡಿ ಇಟ್ಟಿದೆ.

ಮಾತ್ಕಲ್‌ನ ಆನಂದ ನಾಯ್ಕ ಅವರ ತೋಟದ ಬಾಳೆ ಹಾಗೂ ತೆಂಗು ಗಿಡಗಳಿಗೆ ಹಾನಿ ಮಾಡಿದೆ. ಅಣ್ಣಯ್ಯ ಅಂಬಿಗರ ಮನೆ ಸಮೀಪ ಬೈನೆ ಮರವನ್ನೂ ಕೆಡಹಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಭಯ ಬೇಡ
ಆನೆ ಬಗ್ಗೆ ಇಲಾಖೆ ಸಿಬಂದಿ ನಿಗಾ ಇರಿಸಿದ್ದಾರೆ.ಕುಚ್ಚಾರು ಪರಿಸರದಲ್ಲಿ ರಾತ್ರಿ ಒಂಟಿಯಾಗಿ ಸಂಚರಿಸಬೇಡಿ ಎಂದು ಸೂಚನೆ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿ ಚಿದಾನಂದಪ್ಪ ಹೇಳಿದ್ದಾರೆ.

ಮುಳಿಕ್ಕಾರಿನಲ್ಲಿ ಕಾಡಾನೆ
ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಮುಳಿಕ್ಕಾರಿನಲ್ಲಿ ಎರಡು ದಿನಗಳಿಂದ ದಾಳಿ ನಡೆಸುತ್ತಿರುವ ಕಾಡಾನೆಗಳು ಭತ್ತದ ಪೈರನ್ನು ನಾಶ ಮಾಡಿವೆ. ಇಲ್ಲಿನ ಶೀನ ಬಾಜಿದಡಿ ಅವರ ಮನೆ ಹಾಗೂ ಪರಿಸರದ ಗದ್ದೆಗಳಲ್ಲಿ ಕಾಡಾನೆಗಳು ಸುತ್ತಾಡಿ ತೀವ್ರ ಹಾನಿ ಮಾಡಿವೆ. ಪರಿಸರದಲ್ಲಿ ಮರಿಯಾನೆ ಸಹಿತ ಕಾಡಾನೆಗಳು ಆಗಾಗ ಕಂಡುಬರುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next