Advertisement

ಗುಡುಗು ಸಹಿತ ಧಾರಾಕಾರ ಮಳೆ

05:40 PM Apr 06, 2022 | Team Udayavani |

ಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರ ಸಂಜೆ ಗುಡುಗಿನ ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲವೆಡೆ ಬಿರುಸಿನ ಗಾಳಿ ಬೀಸಿದ್ದು, ಇದರಿಂದ ಕಾಡು ಮರ, ಅಡಕೆ ಮರಗಳು ಉರುಳಿ ಬಿದ್ದಿವೆ.

Advertisement

ಒಮ್ಮೆಲೆ ರಭಸವಾದ ಗಾಳಿ ಹಾಗೂ ಅಲ್ಪಾವಧಿಯಲ್ಲಿ ಜೋರಾದ ಮಳೆಯಾಗಿದೆ. ಗಾಳಿಯ ಹೊಡೆತಕ್ಕೆ ವಿದ್ಯುತ್‌ ಮಾರ್ಗದ ಮೇಲೆ ಮರ ಉರುಳಿದ್ದು, ಕೆಲ ಭಾಗದಲ್ಲಿ ವಿದ್ಯುತ್‌ ಕಡಿತವಾಗಿದೆ.

ಕುಂಚೆಬೈಲು, ಮೆಣಸೆ, ಮಸಿಗೆ, ಪಟ್ಟಣ, ಕಲ್ಕಟ್ಟೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಮಸಿಗೆ ಗ್ರಾಮದ ಮರಟೆ ಹಳ್ಳದ ಬಳಿ ವಿದ್ಯುತ್‌ಲೈನ್‌ ಮೇಲೆ ಮರ ಬಿದ್ದಿದ್ದು, ಸಂಚಾರಕ್ಕೂ ಅಡ್ಡಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next