Advertisement

Belthangady ತಾಲೂಕಿನಲ್ಲಿ ಉತ್ತಮ ಮಳೆ: ಮುಂಡಾಜೆ ಪೇಟೆ ಅಂಗಡಿಗೆ, ಮನೆಗಳಿಗೆ ನುಗ್ಗಿದ ನೀರು

06:11 PM Oct 09, 2023 | Team Udayavani |

ಬೆಳ್ತಂಗಡಿ: ತಾಲೂಕಿನಲ್ಲಿ ಸೋಮವಾರ ಸಂಜೆ ಸಿಡಿಲು, ಗುಡುಗು ಸಹಿತ ಉತ್ತಮ ಮಳೆ ಸುರಿಯಲಾರಂಬಿಸಿದೆ. ಪರಿಣಾಮ ರಾಷ್ಟ್ರೀಯ ‌ಹೆದ್ದಾರಿ ಪುಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿಯಿಂದ ಮಳೆ ನೀರು ಮುಂಡಾಜೆ ಪೇಟೆಯ ಕೆಲ ಅಂಗಡಿ, ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.

Advertisement

ಮುಂಡಾಜೆ, ಕಡಿರುದ್ಯಾವರ, ಕಕ್ಕಿಂಜೆ, ಚಾರ್ಮಾಡಿ ವಿಪರೀತ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳೆಲ್ಲ ನೀರು ತುಂಬಿ ಕೆರೆಯಂತಾಗಿದೆ.

ಇದನ್ನೂ ಓದಿ:World Cup 2023: ತಂಡದೊಂದಿಗೆ ಪ್ರಯಾಣಿಸದ ಗಿಲ್; ಎರಡನೇ ಪಂದ್ಯಕ್ಕೂ ಅಲಭ್ಯ

ಹೆದ್ದಾರಿ ಕಾಮಗಾರಿ ಹಿನ್ನೆಲೆ ರಸ್ತೆ ಕೆಸರಮಯವಾಗಿತ್ತು. ಇದೀಗ ಮಳೆಯಿಂದ ನೀರು ಏಕಾಏಕಿ ಹರಿದು ಮನೆಗಳಿಗೆ ನುಗ್ಗುತ್ತಿರುವ ದೃಶ್ಯ ಕಂಡುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next